ವೀರಾಜಪೇಟೆ: ವಿರಾಜಪೇಟೆ ಬಳಿಯ ಮಗ್ಗುಲ ಗ್ರಾಮದಿಂದ ನಲ್ವತ್ತೊಕ್ಕಲು ಗ್ರಾಮಕ್ಕೆ ತೆರಳುವ ರಸ್ತೆ ಡಾಮರೀಕರಣಕ್ಕಾಗಿ ತಾ. 25 ರಂದು ಉಸ್ತುವಾರಿ ಸಚಿವರ ಆಪ್ತರಾದ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ಮಗ್ಗುಲದಲ್ಲಿ ಭೂಮಿ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಚೋಕಂಡ ರಮೇಶ್, ಚಾರಿಮಂಡ ಶರಣು, ಚೇಂದಂಡ ನವೀನ್, ಸಿ.ರಾಮು ಚೋವಂಡ ಮನು, ಪೊನ್ನಣ್ಣಿ, ಕಾಶಿ, ರಾಜ, ಸತೀಶ್, ಚೇಂದಂಡ ಪ್ರವೀಣ್ ಮತ್ತಿತರರು ಹಾಜರಿದ್ದರು.

ನಂತರ ಹರೀಶ್ ಬೋಪಣ್ಣ ಅವರು ಐಮಂಗಲದಿಂದ ಚೆಂಬೆಬೆಳ್ಳೂರು ಗ್ರಾಮದವರೆಗಿನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿಗೆ ರೂ ಒಂದು ಕೋಟಿ ಅನುದಾನ ಒದಗಿಸಿದ ಹರೀಶ್ ಬೋಪಣ್ಣ ಅವರನ್ನು ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ತರಾದ ಹನೀಫ್, ರಫೀಕ್, ರನ್ನುದೇವಯ್ಯ, ಶರಣು, ಕುಂಡ್ರಂಡ ವಾಸು, ನವೀನ್, ಶರಣು ಮತ್ತಿತರರು ಹಾಜರಿದ್ದರು.