ಪೊನ್ನಂಪೇಟೆ, ಮಾ. 23: ಮಾಜಿ ಶಾಸಕರಾದ ಹೆಚ್.ಡಿ.ಬಸವರಾಜು ಅವರು ಇದೀಗ ಎಂ.ಇ.ಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ನೂತನ ಪಕ್ಷ ಸೇರಿದ್ದ ಬೆನ್ನೆಲ್ಲೇ ಅವರನ್ನು ಎಂ.ಇ.ಪಿ. ಪಕ್ಷದ ಕರ್ನಾಟಕ ರಾಜ್ಯ ಚುನಾವಣಾ ಪ್ರಚಾರ ಅಧ್ಯಕ್ಷರಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ. ನವೇರಾ ಶೇಕ್ ಅವರು ನೇಮಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 30 ಜಿಲ್ಲೆಗಳ ಚುನಾವಣಾ ಉಸ್ತುವಾರಿಯನ್ನು ಹೆಚ್.ಡಿ.ಬಸವರಾಜು ಅವರಿಗೆ ವಹಿಸಲಾಗಿದೆ. ಹೆಚ್.ಡಿ.ಬಸವರಾಜು ಅವರು ಈ ಹಿಂದೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2 ಬಾರಿ ಬಿಜೆಪಿ ಶಾಸಕರಾಗಿದ್ದರು. ನಂತರ ಕಾಂಗ್ರೆಸ್ ಸೇರಿದ್ದರು.