ಮಡಿಕೇರಿ, ಮಾ.23: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳು ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಸಭೆಯು ತಾ. 26 28 ರವರೆಗೆ ನಡೆಯಲಿದೆ. ತಾ 26 ರಂದು ಬೆಳಿಗ್ಗೆ 11.ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಸೋಮವಾರಪೇಟೆ ಪ್ರವಾಸಿ ಮಂದಿರ, ತಾ. 28 ರಂದು ಬೆಳಿಗ್ಗೆ 11 ರಿಂದ 2 ಗಂಟೆಯ ವರೆಗೆ ವೀರಾಜಪೇಟೆಯ ಪ್ರವಾಸಿ ಮಂದಿರದಲ್ಲಿ ನಡೆಯಲಿದೆ ಎಂದು ಠಾಣಾಧಿಕಾರಿ ಹಾಗೂ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.