ವೀರಾಜಪೇಟೆ, ಮಾ. 1 : ವೀರಾಜಪೇಟೆ ಬಳಿಯ ಕಾಕೋಟು ಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗಮರೂರು ಜೌಕಿ ಹರಿಶ್ಚಂದ್ರ ಕಾಲೋನಿಯಲ್ಲಿ ರೂ,10 ಲಕ್ಷ ವೆಚ್ಚದ ಅಂಬೇಡ್ಕರ್ ಭವನಕ್ಕೆ ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಕಾಲೋನಿಯಲ್ಲಿ 44 ಮನೆಗಳಿದ್ದು ಸುಮಾರು 24 ವರ್ಷಗಳಿಂದಲೂ ವಾಸವಾಗಿರುವ 26 ಮನೆ ನಿವಾಸಿಗಳಿಗೆ ಹಕ್ಕುಪತ್ರ ದೊರಕಿಲ್ಲ. ಈ ಸಂಬಂಧ ತಾಲೂಕು ತಹಶೀಲ್ದಾರ್ ಬಳಿ ಮಾಹಿತಿ ಪಡೆದು ಸದ್ಯದಲ್ಲೆ ಹಕ್ಕುಪತ್ರ ನೀಡಲು ಪ್ರಯತ್ನ ಮಾಡುವದಾಗಿ ಮಹೇಶ್ ಹೇಳಿದರು.

ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ.ಗಣೇಶ್ ಮಾತನಾಡಿದರು. ಭೂಮಿ ಪೂಜೆ ಸಂದರ್ಭ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಕೆ.ಮಂಜುಳ ಅಯ್ಯಪ್ಪ, ಸ್ಥಳೀಯ ಗ್ರಾ.ಪಂ.ಸದಸ್ಯೆ ಹೆಚ್.ಎಸ್.ಪಾರ್ವತಿ, ಗ್ರಾಮಸ್ಥರಾದ ಎ.ಸತೀಶ್, ರಾಧಿಕ, ಶರತ್, ಹೆಚ್.ಎಂ.ಶಂಭು, ಲಕ್ಷ್ಮಣ ಮುಂತಾದವರು ಉಪಸ್ಥಿತರಿದ್ದರು.