ಮಡಿಕೇರಿ, ಮಾ. 1: ಪೆರಾಜೆಯಲ್ಲಿ ಗೌಡ ಗ್ರಾಮ ಸಮಿತಿ ಹಾಗೂ ಸುಳ್ಯದ ಗೌಡರ ಯುವ ಸೇವಾ ಸಂಘದ ವತಿಯಿಂದ ನಡೆಯುತ್ತಿರುವ ಗೌಡ ಕುಟುಂಬಗಳ ನಡುವಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಕಲ್ಲುಮುಟ್ಲು-ಪಡುಮಜಲು, ಮೇಲ್ಚಂಬು ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.

ಇಂದು ನಡೆದ ಪಂದ್ಯದಲ್ಲಿ ಪಡುಮಜಲು ತಂಡ ಹೊದ್ದೆಟ್ಟಿ ತಂಡವನ್ನು ಮಣಿಸಿತು. ಬಂಗಾರಕೋಡಿ ತಂಡ ಪಾಣತಿಲ ತಂಡವನ್ನು ಸೋಲಿಸಿತು. ಪಿಂಡಿಮನೆ ಬಾರದ ಕಾರಣ ಪಾಲಾರ್ ತಂಡಕ್ಕೆ ವಾಕ್‍ಓವರ್ ಮೂಲಕ ಗೆಲುವು ಲಭಿಸಿತು. ಮೇಲ್ಚಂಬು ತಂಡ ಕೋಯಿಂಗಾಜೆ ತಂಡವನ್ನು ಸೋಲಿಸಿತು. ಕುಂಚಡ್ಕ ತಂಡ ನಾರ್‍ಕೋಡು ತಂಡವನ್ನು ಮಣಿಸಿತು. ಕಲ್ಲುಮುಟ್ಲು ತಂಡ ಪಾಲಾರ್ ತಂಡವನ್ನು ಮಣಿಸಿತು. ಮೇಲ್ಚಂಬು ತಂಡ ನಾರ್‍ಕೋಡ್ ತಂಡವನ್ನು ಸೋಲಿಸಿತು. ಕಲ್ಲುಮುಟ್ಲು ತಂಡ ಬಂಗಾರಕೋಡಿ ತಂಡದ ವಿರುದ್ಧ ಗೆಲುವು ಸಾಧಿಸಿತು.

ತಾ. 2 ರಂದು (ಇಂದು) ಮಾರ್ಪಡ್ಕ, ಪಾಣತ್ತಲೆ ಎ, ಕುದ್ಬಾಜೆ, ಕುರಮಜಲು, ಹನಿಯಡ್ಕ, ಮಾಣಿಬೆಟ್ಟು, ವ್ಯಾಪಾರೆ, ಪೀಚೆ, ಪಡುಮಜಲು, ಕಲ್ಲುಮುಟ್ಲು ತಂಡಗಳ ನಡುವೆ ಪಂದ್ಯ ನಡೆಯಲಿದೆ.