ಸೋಮವಾರಪೇಟೆ, ಫೆ. 7: ಧಾರವಾಡ ನಗರದ ತಹಶೀಲ್ದಾರ್ ಕಚೇರಿ ಎದುರು ನಡೆದಿರುವ ವಕೀಲರ ಕೊಲೆ ಯತ್ನ ಪ್ರಕರಣವನ್ನು ಖಂಡಿಸಿ ಸೋಮವಾರಪೇಟೆ ನ್ಯಾಯಾಲಯದ ವಕೀಲರುಗಳು ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು.

ಕರ್ತವ್ಯ ನಿರತ ವಕೀಲರ ಮೇಲೆ ಇತ್ತೀಚಿನ ದಿನಗಳಲ್ಲಿ ಹಲ್ಲೆಗಳು ನಡೆಯುತ್ತಿದ್ದು, ಇದು ಅತ್ಯಂಕ ಕಳವಳಕಾರಿ. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಕರ್ನಾಟಕ ವೈದ್ಯರ ಮೇಲೆ ಹಿಂಸಾಚಾರ ನಿಷೇಧ ಕಾಯ್ದೆ ಜಾರಿಯಲ್ಲಿರುವಂತೆ ಕರ್ನಾಟಕ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕೆಂದು ವಕೀಲರ ಸಂಘದ ಉಪಾಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ಒತ್ತಾಯಿಸಿದರು.

ಈ ಸಂದರ್ಭ ವಕೀಲರುಗಳಾದ ಡಿ.ಎಂ. ಪೂವಯ್ಯ, ಮಂಜುನಾಥ್ ಚೌಟ, ಹೆಚ್.ಎಸ್. ಪ್ರಕಾಶ್, ಹೇಮಚಂದ್ರ, ಪದ್ಮನಾಭ, ಹರೀಶ್, ಮಾನಸ, ರೂಪ, ಪ್ರೀತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.