ವೀರಾಜಪೇಟೆ, ಫೆ. 7: ವೀರಾಜಪೇಟೆಯ ಟೀಂ ಡ್ಯೂಡ್ಸ್ ವತಿಯಿಂದ ಮಾರ್ಚ್ 17 ರಂದು ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿ.ಜಿ. ಸುಮನ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುಮನ್, ಕಬಡ್ಡಿ ಉತ್ತಮ ಪಂದ್ಯವಾಗಿದ್ದು ಇತ್ತೀಚಿನ ದಿನಗಳಲ್ಲಿ ಪಂದ್ಯ ನಶಿಸಿ ಹೋಗುತ್ತಿರುವದನ್ನು ತಡೆಯುವ ಸಲುವಾಗಿ ಗ್ರಾಮಾಂತರ ಮಟ್ಟದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ಆಯೋಜಿಸಲಾಗಿದೆ. ಗ್ರಾಮಾಂತರ ಪ್ರದೇಶದ ಕ್ರೀಡಾ ಪ್ರತಿಭೆಗಳಿಗೆ ಇದೊಂದು ಸದವಕಾಶವಾಗಿದೆ. ವೀರಾಜಪೇಟೆಯಲ್ಲಿ ಸಂಸ್ಥೆ ವತಿಯಿಂದ ಮೂರನೇ ವರ್ಷ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ಏರ್ಪಡಿಸಲಾಗಿದೆ ಎಂದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ್ ಮಾತನಾಡಿ, ಪ್ರಥಮ ಬಹುಮಾನ ರೂ. 20,000 ನಗದು ಟ್ರೋಫಿ, ದ್ವಿತೀಯ ರೂ. 15000 ಟ್ರೋಫಿ, ತೃತೀಯ ರೂ. 7000, ಟ್ರೋಫಿ ಹಾಗೂ ಚತುರ್ಥ ರೂ. 3000 ಟ್ರೋಫಿ, ನೀಡಲಾಗುವದು. ಮಾ. 15 ರೊಳಗೆ ತಂಡದ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9900384567 ಹಾಗೂ 9060786645 ಸಂಪರ್ಕಿಸಬಹುದು ಎಂದು ಹೇಳಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಹೇಮಂತ್, ಖಜಾಂಚಿ ಹರೀಶ್ ಉಪಸ್ಥಿತರಿದ್ದರು.