ಮಡಿಕೇರಿ, ಫೆ. 1: ಇಲ್ಲಿಗೆ ಸಮೀಪದ ಕೂಟುಹೊಳೆಯಲ್ಲಿ ನಿನ್ನೆ ಸಂಜೆಗತ್ತಲೆ ನಡುವೆ ವಿಹಾರ ಮಾಡುತ್ತಿದ್ದ ವೇಳೆ ಸ್ನಾನಕ್ಕೆಂದು ಇಳಿದ ವ್ಯಕ್ತಿ ನೀರು ಪಾಲಾಗಿ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ.

ಅಲ್ಲಿನ ನಿವಾಸಿ ಹರೀಶ ಯಾನೆ ಪ್ರಭಾಕರ್ (49) ದುರಂತ ಸಾವನ್ನಪ್ಪಿದ್ದು, ಇಂದು ಗ್ರಾಮಾಂತರ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಮೂಲಕ ಶವ ಹೊರೆ ತೆಗೆದು ಮರಣೋತ್ತರ ಪರೀಕ್ಷೆ ಬಳಿಕ ಬಂಧುಗಳಿಗೆ ಒಪ್ಪಿಸಿದ್ದಾರೆ. ಆಕಸ್ಮಿಕ ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ.