ಶನಿವಾರಸಂತೆ, ಫೆ. 1: ಮನಸ್ಸು ಹಾಗೂ ದೇಹದ ಸ್ವಾಸ್ಥ್ಯಕ್ಕೆ ಯೋಗ ಅವಶ್ಯಕ ಎಂದು ಬೆಂಗಳೂರಿನ ಪ್ರಣವಯೋಗ ಪ್ರತಿಷ್ಠಾನ ನಿರ್ದೇಶಕ ಅಶೋಕ್ ವಿ. ರೆಡ್ಡಿ ಅಭಿಪ್ರಾಯಪಟ್ಟರು.

ಪಟ್ಟಣದ ಪತಂಜಲಿ ಯೋಗ ಬಂಧುಗಳು ಹಾಗೂ ರೋಟರಿ ವತಿಯಿಂದ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನಡೆದ ವಿಶೇಷ ಯೋಗ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಹದ ಸರ್ವತೋಮುಖ ದೃಢತೆ ಹಾಗೂ ಬೆಳವಣಿಗೆಗೆ ಸೂರ್ಯ ನಮಸ್ಕಾರ ಅಗತ್ಯವಾಗಿದೆ. ನಿರಂತರ ಅಭ್ಯಾಸ ಯೋಗಕ್ಕೆ ಫಲ ನೀಡುತ್ತದೆ ಎಂದರು.