ಮಡಿಕೇರಿ, ಫೆ. 1: ಕೇಂದ್ರ ಸರ್ಕಾರದ 2018ನೇ ಸಾಲಿನ ಆಯವ್ಯಯ ಇಂದು ಪ್ರಕಟಗೊಂಡಿದ್ದು, ಆರೋಗ್ಯ, ಶಿಕ್ಷಣ ಹಾಗೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಂಸತ್‍ನಲ್ಲಿ ಮಂಡಿಸಿದ ಆಯ ವ್ಯಯದಲ್ಲಿ ಪ್ರತಿಯೊಂದು ಕುಟುಂಬಕ್ಕೆ 5 ಲಕ್ಷ ರೂ.ಗಳ ಆರೋಗ್ಯ ವಿಮೆಯನ್ನು ಘೋಷಿಸಲಾಗಿದ್ದು, 10 ಕೋಟಿ ಕುಟುಂಬಗಳಿಗಾಗಿ ಈ ಯೋಜನೆ ಯನ್ನು ಜಾರಿಗೆ ತರಲಾಗಿದೆ. ಶಿಕ್ಷಣಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಕಪ್ಪು ಬೋರ್ಡ್‍ಗಳ ಬದಲಿಗೆ ಡಿಜಿಟಲ್ ಬೋರ್ಡ್‍ಗಳನ್ನು ಶಾಲೆಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೃಷಿ ಉತ್ಪನ್ನ ಕಂಪೆನಿಗಳಿಗೆ ಶೇ. 100 ರಷ್ಟು ತೆರಿಗೆ ವಿನಾಯಿತಿ ನೀಡಲಾಗಿದೆ.

ಇನ್ನುಳಿದಂತೆ ಆಯವ್ಯಯದಲ್ಲಿ ಭಾರತ ಏರ್‍ಪೋರ್ಟ್ ಪ್ರಾಧಿಕಾರ ದಡಿಯಲ್ಲಿ 124 ವಿಮಾನ ನಿಲ್ದಾಣಗಳಿದ್ದು, ಇದನ್ನು 5 ಪಟ್ಟು ಹೆಚ್ಚಿಸಲು ಕ್ರಮ, ವೈದ್ಯಕೀಯ ವಿನಾಯಿತಿ ಮಿತಿ ಸೆಕ್ಷನ್ 80ರ ಅಡಿಯಲ್ಲಿ ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿ 10 ಸಾವಿರದಿಂದ 50 ಸಾವಿರ ರೂ. ಗಳಿಗೆ ಏರಿಕೆ. ವೈದ್ಯಕೀಯ ವಿಮೆ 30 ಸಾವಿರದಿಂದ 50 ಸಾವಿರ ರೂ.ಗೆ ಏರಿಕೆ, ಹಿರಿಯ ನಾಗರಿಕರಿಗೆ 1 ಲಕ್ಷ ರೂ.ವರೆಗೂ ಹೆಚ್ಚಳ, ತೆರಿಗೆ ಸ್ಲಾಬ್‍ಗಳಲ್ಲಿ ಯಾವದೇ ಬದಲಾವಣೆ ಇಲ್ಲ. 2.5ಲಕ್ಷವರೆಗಿನ ಆದಾಯಕ್ಕೆ ಯಾವದೇ ರೀತಿಯ ತೆರಿಗೆ ಇಲ್ಲ. 2.5 ರಿಂದ 5 ಲಕ್ಷವರೆಗಿನ ಆದಾಯಕ್ಕೆ ಶೇ. 5 ರಷ್ಟು ತೆರಿಗೆ, 5 ಲಕ್ಷದಿಂದ 10 ಲಕ್ಷವರೆಗೆ ಶೇ. 20 ರಷ್ಟು ಮತ್ತು 10 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ. 30 ರಷ್ಟು ತೆರಿಗೆ, 40 ಸಾವಿರ ರೂ.ವರೆಗಿನ ಸ್ಟ್ಯಾಂಡರ್ಡ್ ಡಿಡಕ್ಷನ್ ಶೀಘ್ರ ಜಾರಿ.

ಈ ವರ್ಷ ಜಿಎಸ್‍ಟಿ 12 ತಿಂಗಳ ಬದಲಿಗೆ 11 ತಿಂಗಳಿಗೆ ಪಾವತಿ, ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಾವದೇ ಬದಲಾವಣೆ ಇಲ್ಲ. ಹಿಂದಿನ ಆದಾಯ ತೆರಿಗೆಯನ್ನೇ ಮುಂದುವರಿಕೆ. 90 ಸಾವಿರ ಕೋಟಿ ಆದಾಯ ತೆರಿಗೆ ಸಂಗ್ರಹ, ವಾರ್ಷಿಕ 250 ಕೋಟಿ ವಹಿವಾಟು ನಡೆಸಿದ ಕಾರ್ಪೋರೇಟ್ ಸಂಸ್ಥೆಗೆ ತೆರಿಗೆ ಕಡಿತ. ವಿತ್ತಿಯ ಕೊರತೆ ಶೇಕಡಾ 3ಕ್ಕೆ ಇಳಿಕೆಯಾಗಿದ್ದು, ತೆರಿಗೆಯೇತರ ಆದಾಯದಲ್ಲಿ ಏರಿಕೆಯಾಗಿದೆ. ಅಂತೆಯೇ 85 ಲಕ್ಷ ಜನರು ಐಟಿಆರ್ ಸಲ್ಲಿಕೆ ಮಾಡಿದ್ದು,

‘ಬಜೆಟ್ ಹೈಲೆಟ್ಸ್’

ಅಬಕಾರಿ ಸುಂಕ ಶೇ. 15 ರಿಂದ 20ಕ್ಕೆ ಏರಿಕೆ

ಈ 5 ಲಕ್ಷ ಹಳ್ಳಿಗಳಲ್ಲಿ ವೈಫೈ ಸೌಲಭ್ಯ

ಈ 1 ಲಕ್ಷ ಗ್ರಾ.ಪಂ.ಗಳಿಗೆ ಹೈಸ್ಪೀಡ್ ಇಂಟರ್‍ನೆಟ್

ಈ ಎಸ್‍ಸಿ, ಎಸ್‍ಟಿ ಅಭಿವೃದ್ಧಿಗೆ 1 ಲಕ್ಷದ 5 ಸಾವಿರ ಕೋಟಿ ಅನುದಾನ

ಈ ಮುದ್ರಾ ಯೋಜನೆಗೆ 3 ಲಕ್ಷ ಕೋಟಿ ಮೀಸಲು

ಕ್ಷಯ ರೋಗಿಗಳಿಗೆ ತಿಂಗಳಿಗೆ ರೂ. 600 ರೂ ನೆರವು

ಈ 600 ಕೋಟಿ ರೂ., ಟಿಬಿ ರೋಗಿಗಳಿಗೆ ತಲಾ 500 ವೆಚ್ಚದಲ್ಲಿ ಚಿಕಿತ್ಸೆ

ಬಡವರಿಗೆ ಉಚಿತ ಡಯಾಲಿಸಿಸ್, ಸ್ಟೆಂಟ್ ದರ ಇಳಿಕೆ

ಒಂದೇ ದಿನದಲ್ಲಿ ಪಾಸ್ ಪೋರ್ಟ್ ನೀಡಿಕೆಗೆ ಕ್ರಮ(ಮೊದಲ ಪುಟದಿಂದ) ನೇರ ತೆರಿಗೆಯಲ್ಲಿ ಶೇ 17 ರಷ್ಟು ಹೆಚ್ಚಳವಾಗಿದೆ. ಪ್ರಸ್ತುತ ದೇಶದ ತೆರಿಗೆದಾರರು 8 ಕೋಟಿ ದಾಟಿದ್ದು, ಹೊಸದಾಗಿ 5 ಕೋಟಿ ತೆರಿಗೆದಾರರು ಸೇರ್ಪಡೆಯಾಗಿದ್ದಾರೆ.

ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಮುಂದಿನ ವರ್ಷದಲ್ಲಿ ಬಡವರಿಗಾಗಿ 2 ಕೋಟಿ ಹೆಚ್ಚುವರಿ ಶೌಚಾಲಯ ನಿರ್ಮಿಸುವ ಗುರಿ. 14 ಸರ್ಕಾರಿ ಕಂಪೆನಿಗಳು ಷೇರು ಮಾರುಕಟ್ಟೆಗೆ ಪ್ರವೇಶ, ಸಮಗ್ರ ಬಂಗಾರ ನೀತಿ ಜಾರಿ, ಚಿನ್ನ ನಗದೀಕರಣ ವ್ಯವಸ್ಥೆಯಲ್ಲಿ ಬದಲಾವಣೆ. ಎಲ್ಲಾ ಜಿಲ್ಲೆಗಳಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ, ಉದ್ಯೋಗಾಕಾಂಕ್ಷಿಗಳಿಗೆ ಆಧಾರ್ ಮಾದರಿಯ 16 ಅಂಕಿಗಳ ಸಂಖ್ಯೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ಸಂಬಳ ಹೆಚ್ಚಳ.

ದೇಶದೆಲ್ಲೆಡೆ ಇರುವ ಬ್ರಾಡ್ ಗೇಜ್ ಮಾರ್ಗ ಉನ್ನತೀಕರಣ, ರಕ್ಷಣಾ ಇಲಾಖೆಗೆ 2 ಶಸ್ತ್ರಾಸ್ತ್ರ ನಿರ್ಮಾಣ ಕಾರಿಡಾರ್, ಖಾಸಗಿ ಹೂಡಿಕೆ, ಮುಂಬೈ ಸ್ಥಳೀಯ ರೈಲು ಅಭಿವೃದ್ಧಿಗಾಗಿ 11 ಸಾವಿರ ಕೋಟಿ, ದೇಶದೆಲ್ಲೆಡೆ ಇರುವ ಬ್ರಾಡ್‍ಗೇಜ್‍ಗಳ ಉನ್ನತೀಕರಣ. ಐಐಡಿ ಚೆನ್ನೈನಲ್ಲಿ 5ಜಿ ಅಧ್ಯಯನ ಕೇಂದ್ರ, 5 ಕೋಟಿ ಗ್ರಾಮೀಣ ನಾಗರಿಕರಿಗೆ 5 ಲಕ್ಷ ಆಸ್ಪತ್ರೆಗಳ ನಿರ್ಮಾಣ, ಮುಂಬೈನಲ್ಲಿ ಲೋಕಲ್ ಟ್ರೈನ್ ಮಾರ್ಗ 90 ಕಿ.ಮೀ. ಹೆಚ್ಚಳ. ಕ್ರಿಪ್ಟೋ ಕರೆನ್ಸಿಗೆ ಕಾನೂನು ಮಾನ್ಯತೆ ಇಲ್ಲ. 700 ಲೊಕೋಮೋಟಿವ್‍ಗಳ ನಿರ್ಮಾಣ, 600 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ. ಸಬ್ ಅರ್ಬನ್ ರೈಲು ಯೋಜನೆಗೆ ಒಟ್ಟು 40 ಸಾವಿರ ಕೋಟಿ, ಬೆಂಗಳೂರು ಸಬ್ ಅರ್ಬರನ್ ರೈಲು ಯೋಜನೆಗೆ 17 ಸಾವಿರ ಕೋಟಿ. ಭಾರತ್ ಮಾಲಾ ಯೋಜನೆಯಡಿ 35 ಸಾವಿರ ಕಿ.ಮೀ. ಮೇಲ್ದರ್ಜೆಗೆ 1 ಲಕ್ಷ 48 ಸಾವಿರದ 500 ಕೋಟಿ ರೂ. ರೈಲ್ವೆಗೆ ಅನುದಾನ.

ಪ್ರವಾಸೋದ್ಯಮ ಉತ್ತೇಜನಕ್ಕೆ ನೂತನ ರಸ್ತೆ ನಿರ್ಮಾಣ ಈ ವರ್ಷ ಮತ್ತೆ 100 ಸ್ಮಾರ್ಟ್ ಸಿಟಿಗೆ 2.4 ಲಕ್ಷ ಕೋಟಿ ಅನುದಾನ, ಲಡಾಕ್ ವಲಯದಲ್ಲಿ ಸುರಂಗ ನಿರ್ಮಾಣ. ಈ ವರ್ಷ 70 ಲಕ್ಷ ಉದ್ಯೋಗ ಸೃಷ್ಟಿಗೆ ಕ್ರಮ, ಚಿಕ್ಕ, ಅತಿ ಚಿಕ್ಕ, ಮಧ್ಯಮ ಗಾತ್ರದ ಉದ್ಯಮಕ್ಕೆ 3794 ಕೋಟಿ ಮೀಸಲು, ಸಾರ್ವಜನಿಕ ಹೂಡಿಕೆಗೆ ಒತ್ತು, ಟೆಕ್ಸ್ ಟೈಲ್ಸ್ ಉದ್ಯಮಕ್ಕೆ 7 ಸಾವಿರ ಕೋಟಿ ಮೀಸಲು. ಆಯುಷ್ಮಾನ್ ಭಾರತ್ ಹೊಸ ಯೋಜನೆ ಜಾರಿಗೆ, ನಮಾಮಿ ಗಂಗಾ ಯೋಜನೆಗೆ ಹೆಚ್ಚಿನ ಆದ್ಯತೆ, ಗಂಗಾ ತಟದಲ್ಲಿನ ಗ್ರಾಮಗಳಲ್ಲಿ ಸ್ವಚ್ಛತೆಗಾಗಿ ಹೆಚ್ಚಿನ ಆದ್ಯತೆ, 16730 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಶೌಚಾಲಯ ನಿರ್ಮಾಣ. ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಮುಂದಿನ ವರ್ಷದಲ್ಲಿ ಬಡವರಿಗಾಗಿ 2 ಕೋಟಿ ಹೆಚ್ಚುವರಿ ಶೌಚಾಲಯ ನಿರ್ಮಿಸುವ ಗುರಿ, ನಮಾಮಿ ಗಂಗೆ ಯೋಜನೆಗೆ ಹೆಚ್ಚಿನ ಆದ್ಯತೆ, 16730 ಕೋಟಿ ವೆಚ್ಚದಲ್ಲಿ ಗಂಗಾನದಿ ತಡದಲ್ಲಿನ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ.

ಹೆಲ್ತ್‍ವೆಲ್ ನೆಸ್ ಸ್ಕೀಂಗಾಗಿ ಕೋಟಿ ರೂ. ಅನುದಾನ, ಪ್ರತಿ 3 ಸಂಸತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಮೆಡಿಕಲ್ ಕಾಲೇಜು ಸ್ಥಾಪನೆ. ಬಡವರಿಗೆ ಉಚಿತ ಔಷಧಿ ದೊರಕಿಸಲು 12,000 ಕೋಟಿ ರೂ. ಮೀಸಲು. ನ್ಯಾಷನಲ್ ಹೆಲ್ತ್ ಪಾಲಿಸಿ ಮೂಲಕ ಅತ್ಯುತ್ತಮ ಆರೋಗ್ಯ ಸೇವೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗೆ 30 ಸಾವಿರ ಕೋಟಿ. ರಾಷ್ಟ್ರೀಯ ಹೆಲ್ತ್ ಪಾಲಿಸಿ ಮೂಲಕ ರೋಗಿಗಳಿಗೆ ಉಚಿತ, ವಡೋದರಾದಲ್ಲಿ ರೈಲ್ವೆ ವಿವಿ ಸ್ಥಾಪನೆ, ಬಿಟೆಕ್ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಸ್ಕಾಲರ್ ಶಿಪ್, ಪ್ರತಿ ವರ್ಷ 1000 ಬಿಟೆಕ್ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪಿಹೆಚ್‍ಡಿ ಮಾಡಲು ಉತ್ತೇಜನ, ಬುಡಕಟ್ಟು ವಿದ್ಯಾರ್ಥಿಗಳಿಗೆ ಏಕಲವ್ಯ ವಸತಿ ಶಾಲೆ ಯೋಜನೆ.

ರೈತರ ಸಾಲಗಳಿಗಾಗಿ 11 ಲಕ್ಷ ಕೋಟಿ ಅನುದಾನ, ಬೆಳೆಯನ್ನು ನೇರವಾಗಿ ಮಾರಾಟ ಮಾಡಲು ಅವಕಾಶ, ಗ್ರಾಮಾಂತರ ಬಜಾರ್ - ಇ ನಿರ್ಮಿಸಲು ಯೋಜನೆ, 2022 ವೇಳೆಗೆ ಮನೆ ಇಲ್ಲದವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಸ್ವಂತ ಮನೆ ನಿರ್ಮಾಣ ಮಾಡಲು ಯೋಜನೆ. 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಪೂರೈಕೆ, 42 ಮೆಗಾ ಫುಡ್ ಪಾರ್ಕ್ ಪ್ರಾರಂಭ, ಎಪಿಎಂಸಿ ಉನ್ನತೀಕರಣಕ್ಕೆ 2,000 ಕೋಟಿ, ಆಹಾರ ಸಂಸ್ಕರಣೆ, ಖಾದಿ ಗ್ರಾಮೋದ್ಯಮಕ್ಕೆ 200 ಕೋಟಿ, ಆಪರೇಷನ್ ಗ್ರೀನ್‍ಗೆ 500 ಕೋಟಿ ರೂ. ಮೀಸಲು. ರೈತರ ಅನುಕೂಲಕ್ಕೆ 22 ಸಾವಿರ ಮಾರುಕಟ್ಟರ, ಮಾರ್ಚ್ ವೇಳೆಗೆ 470 ಎಪಿಎಂಸಿಗಳಿಗೆ ಇ-ನಾಮ್ ಸಂಪರ್ಕ.

ಕೃಷಿ ಉಗ್ರಾಣ ಸಂಗ್ರಹ ಸಾಮಥ್ರ್ಯ ಹೆಚ್ಚಿಸಲು ಕ್ರಮ, ಸಾವಯವ ಕೃಷಿಗೆ ಹೆಚ್ಚು ಉತ್ತೇಜನ, ಸುಮಾರು 1000 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿಗೆ ಒತ್ತು, ರೈತರಿಗೆ ತಮ್ಮ ಬೆಳೆ ಬೆಲೆ ನಿಗದಿ ಸ್ವಾತಂತ್ರ್ಯ, ಆಹಾರ ಸಂಸ್ಕರಣೆಗಾಗಿ ನೀಡುವ ಅನುದಾನ ಹೆಚ್ಚಳ. ನೇರ ನಗದು ವರ್ಗಾವಣೆ ಮೂಲಕದ ಪಾರದರ್ಶಕತೆ, ಬಡವರಿಗಾಗಿ ಜನರಿಕ್ ಔಷಧ ಕೇಂದ್ರಗಳ ಸ್ಥಾಪನೆ.