ಸಿದ್ದಾಪುರ, ಫೆ. 1: ಸಮೀಪದ ಗುಯ್ಯ ಗ್ರಾಮದ ಕೂಡುಗದ್ದೆ ಯಲ್ಲಿರುವ ಬಿಲಾಲ್ ಜುಮಾ ಮಸೀದಿ ವಾರ್ಷಿಕೋತ್ಸವ ಹಾಗೂ ದಿಖ್ರ್ ದುಆ ಮಜ್ಲಿಸ್ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಗುಯ್ಯ ತರೆಬಿಯತ್ತುಲ್ ಇಸ್ಲಾಂ ಸಮಿತಿ ನೇತೃತ್ವದಲ್ಲಿ ಅಧ್ಯಕ್ಷ ಸಿ.ಯು. ಮುಸ್ತಫ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್ ಮಾತನಾಡಿ, ಮುಸ್ಲಿಂ ಧರ್ಮದಲ್ಲಿ ಮದ್ರಸಗಳಲ್ಲಿ ಶಿಕ್ಷಣ ನೀಡುವ ಹಿನ್ನೆಲೆ ಮುಸ್ಲಿಂ ಧರ್ಮದವರು ವೃದ್ಧ ಆಶ್ರಮಗಳನ್ನು ಪ್ರಾರಂಭಿಸಿರುವದಿಲ್ಲವೆಂದು ತಿಳಿಸಿದರು. ಗುಹ್ಯ ಮಸೀದಿ ನಿರ್ಮಾಣಕ್ಕೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಸ್ಮಶಾನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಮುಖಾಂತರ ಅನುದಾನವನ್ನು ಬಿಡುಗಡೆಗೊಳಿಸಿಕೊಡುವದಾಗಿ ಭರವಸೆ ನೀಡಿದರು. ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಹಮೀದ್ ಮಾತನಾಡಿ, ದಿಖ್ರ್ ದುಆ ಮಜ್ಲಿಸ್ ಧಾರ್ಮಿಕ ಕಾರ್ಯಕ್ರಮ ಅಲ್ಪ ಸಂಖ್ಯಾತ ಸಮುದಾಯಕ್ಕೆ ಅವಶ್ಯಕತೆ ಇದೇ ಎಂದರು. ಮಜ್ಲಿಸ್‍ನಿಂದಾಗಿ ಆಧ್ಯಾತ್ಮಿಕ ಶಿಕ್ಷಣದ ಜ್ಞಾನ ಹೆಚ್ಚಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಧಾರ್ಮಿಕ ಕಾರ್ಯಕ್ರಮವನ್ನು ಗುಯ್ಯ ಮಸೀದಿಯ ಖತೀಬ್ ಉದ್ಘಾಟನೆ ಮಾಡಿದರು. ಸಯ್ಯಿದ್ ಸೈನುದ್ದೀನ್ ಅಲ್ ಬುಖಾರಿ ಮತ್ತು ಮಳಾಹಿರಿ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಿದರು. ಕಾಂಗ್ರೆಸ್ ಅಲ್ಪಸಂಖ್ಯಾತ ರಾಜ್ಯ ಉಪಾಧ್ಯಕ್ಷ ಪಿ.ಸಿ. ಹಸೈನಾರ್ ಹಾಜಿ, ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ ಮಣಿ, ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ, ಸದಸ್ಯರಾದ ರವೂಫ್ ಹಾಜಿ, ಮುಸ್ತಫ ಹಾಜಿ, ಗ್ರಾಮ ಪಂಚಾಯಿತಿ ಸದಸ್ಯರಾದ ರಜೀತ್ ಕುಮಾರ್, ಖಾದರ್, ಮಾಜಿ ಸದಸ್ಯ ವಿ.ಕೆ. ಬಶೀರ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಡಾ. ದುರ್ಗಾ ಪ್ರಸಾದ್, ಕಾರ್ಮಿಕ ಮುಖಂಡ ಎಂ.ಡಿ. ಕುಟ್ಟಪ್ಪ, ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಕೆ. ಹಕೀಂ, ಸದಸ್ಯ ಸಿ.ಹೆಚ್. ಫಯಾಝ್ ಅಹಮ್ಮದ್, ಪ್ರಮುಖರಾದ ಇಬ್ರಾಹಿಂ, ಮಣಿ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.