ಒಡೆಯನಪುರ, ಜ. 26: ಕೊಡಗಿನ ವಿವಿಧ ಕ್ರೀಡಾ ಸಾಧಕರಿಗೆ ಇತ್ತೀಚೆಗೆ ಗುಡುಗಳಲೆ ಜಯದೇವ ಜಾತ್ರಾ ಮೈದಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಡಿದ್ದ 2018ನೇ ಸಾಲಿನ ಜಿಲ್ಲಾ ಮಟ್ಟದ ವೀರಶೈವ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಂತರಾಷ್ಟ್ರೀಯ ಹಾಕಿ ಪಟು ಎಸ್.ವಿ. ಸುನೀಲ್, ಹಿರಿಯ ಹಾಕಿ ಪಟು ಮತ್ತು ತೀರ್ಪುಗಾರ ಟಿ.ಎಸ್. ಶಶಿಧರ್, ಹಿರಿಯ ಹಾಕಿ ತೀರ್ಪುಗಾರ ಎಂ.ಎನ್. ಉಮೇಶ್, ಅಥ್ಲೆಟಿಕ್ಸ್ ಪಟು ಎ.ಡಿ. ಚೇತನ, ಬ್ಯಾಡ್ಮಿಂಟನ್ ಪಟು ಜಿ. ಸುರಭಿ, ದೇಹಧಾಢ್ರ್ಯ ಸ್ಪರ್ಧಿ ರಥನ್ ರಮೇಶ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ವೀರಶೈವ ಸಮಾಜದ ಪ್ರಮುಖರು ಹಾಜರಿದ್ದರು.