ಮಡಿಕೇರಿ, ಜ. 26: ಸೋಮವಾರಪೇಟೆ ತಾಲೂಕು ಬಲಿಜ ಸಮಾಜz ನೇತೃತ್ವದಲ್ಲಿ ತಾ. 28 ರಂದು ಹಾರಂಗಿ ಸಮೀಪ ಅತ್ತೂರುವಿನ ಸಿಪಾಯಿ ರೆಸಾರ್ಟ್‍ನಲ್ಲಿ ಕೊಡಗು ಜಿಲ್ಲಾ ಬಲಿಜ ಸಮಾಜ ಹಾಗೂ ಮೂರು ತಾಲೂಕು ಬಲಿಜ ಸಮಾಜ ಸಭೆ ನಡೆಯಲಿದೆ.

ಕೊಡಗು ಜಿಲ್ಲೆಯ ಸಮಗ್ರ ಬಲಿಜ ಸಮುದಾಯದ ಸಂಘಟನೆ, ಸೋಮವಾರಪೇಟೆ ತಾಲೂಕು ಬಲಿಜ ಗಣತಿ ಕಾರ್ಯಕ್ರಮ, ಕೊಡಗು ಬಲಿಜ ಕ್ರೀಡಾ ಹಬ್ಬ ಹಾಗೂ ವಿವಿಧ ವಿಷಯಗಳ ಕುರಿತಂತೆ ಚರ್ಚೆ ನಡೆಯಲಿದೆ ಎಂದು ಜಿಲ್ಲಾ ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಹಾಗೂ ಸೋಮವಾರಪೇಟೆ ತಾಲೂಕು ಬಲಿಜ ಸಮಾಜ ಅಧ್ಯಕ್ಷ ಟಿ.ಡಿ. ದಯಾನಂದ್ ತಿಳಿಸಿದ್ದಾರೆ.