ಗೋಣಿಕೊಪ್ಪ ವರದಿ, ಜ. 26: ಕಾಫಿ ಬೆಳೆಗಾರರ ಸಮಾಲೋಚನಾ ಸಭೆಯನ್ನು ತಾ. 30 ರಂದು ಮಧ್ಯಾಹ್ನ 3 ಗಂಟೆಗೆ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕಾಫಿ ಮಂಡಳಿ ಸಂಶೋಧನಾ ನಿರ್ದೇಶಕ ಡಾ. ರಘುರಾಮ್ ತಿಳಿಸಿದ್ದಾರೆ.

ಕಾಫಿ ಮಂಡಳಿ ಸಂಶೋಧನಾ ಸಮಿತಿ ವತಿಯಿಂದ ನಡೆಯುವ ಸಭೆಯಲ್ಲಿ ದಕ್ಷಿಣ ಕೊಡಗಿನ ಕಾಫಿ ಬೆಳೆಗಾರರು ಸಮಸ್ಯೆಗಳನ್ನು ತಿಳಿಸಲು ಅವಕಾಶವಿದೆ. ಕಾಫಿ ಬೆಳೆ ಬೆಳೆಯುತ್ತಿರುವ ಬೆಳೆಗಾರರು ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಹಂಚಿಕೊಳ್ಳಬಹುದಾಗಿದೆ. ಬೆಳೆಗಾರರು ಹಾಗೂ ಬೆಳಗಾರರ ವಿವಿಧ ಸಂಘಟನೆಯ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.