ಶ್ರೀಮಂಗಲ, ಜ. 26: ಕಾಫಿ ತೋಟದ ಮಣ್ಣಿನ ಆರೋಗ್ಯ ವೃದ್ಧಿಸಿ, ಉತ್ತಮ ಫಸಲು ಪಡೆಯುವ ನಿಟ್ಟಿನಲ್ಲಿ ಮತ್ತು ಬೆಳೆಗಳಿಗೆ ಬೇಕಾದ ನಿರ್ದಿಷ್ಟ ಪೋಷಕಾಂಶದ ಅಗತ್ಯತೆ ಅನುಗುಣವಾಗಿ ರಸಗೊಬ್ಬರ ಪೂರೈಸುವ ನಿಟ್ಟಿನಲ್ಲಿ ಮಣ್ಣು ಪರೀಕ್ಷೆಗೆ ಮಹತ್ವ ನೀಡಬೇಕಾಗಿದೆ. ಆದ್ದರಿಂದ ತಾ. 29ಕ್ಕೆ ಶ್ರೀಮಂಗಲ ಕಾಫಿ ಮಂಡಳಿ ಕಛೇರಿಯಲ್ಲಿ ಬೆಳೆಗಾರರ ತೋಟದ ಮಣ್ಣು ಪರೀಕ್ಷೆ ನಡೆಸುವ ಕಾರ್ಯಕ್ರಮ ನಡೆಯಲಿದೆ ಎಂದು ಕಾಫಿ ಮಂಡಳಿ ಸದಸ್ಯರಾದ ಮಚ್ಚಮಾಡ ಡಾಲಿ ಚಂಗಪ್ಪ ತಿಳಿಸಿದ್ದಾರೆ. ಶ್ರೀಮಂಗಲ ಕಾಫಿ ಮಂಡಳಿಯ ವ್ಯಾಪ್ತಿಗೆ ಬರುವ ಪ್ರದೇಶದ ಕಾಫಿ ಬೆಳೆಗಾರರ ತೋಟದ ಮಣ್ಣನ್ನು ಪರೀಕ್ಷೆ ಮಾಡಿ ಅದೇ ದಿನ ಫಲಿತಾಂಶವನ್ನು ಬೆಳೆಗಾರರಿಗೆ ನೀಡಲಾಗುವದು.

ಬೆಳೆಗಾರರು ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಕಾಫಿ ಮಂಡಳಿ ಸಂಪರ್ಕಾಧಿಕಾರಿ ಅವರನ್ನು 9449072842 ಮೂಲಕ ಮಾಹಿತಿ ಪಡೆದುಕೊಳ್ಳಬಹುದು.