ವೀರಾಜಪೇಟೆ ಜ. 26: ವೀರಾಜಪೇಟೆಯ ಐಮಂಗಲ ಗ್ರಾಮದಿಂದ ಚೆಂಬೆಬೆಳ್ಳೂರು ಗ್ರಾಮಕ್ಕೆ ತೆರಳುವ ರಸ್ತೆ ಕಾಮಗಾರಿಗೆ ಮಲೆನಾಡು ಅಭಿವೃದ್ಧಿ ಯೋಜನೆಯಡಿಯಲ್ಲಿ ರೂ. 5 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಕೊಡಗಿನ ಉಸ್ತುವಾರಿ ಸಚಿವರ ಆಪ್ತರಾದ ಕದ್ದಣಿಯಂಡ ಹರೀಶ್ ಬೋಪಣ್ಣ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಚೇಂದಂಡ ನವೀನ್, ಚಾರಿಮಂಡ ಶರಣು, ರನ್ನುದೇವಯ್ಯ, ಮೇಕತಂಡ ರಘು, ಹನೀಫ್, ರಫೀಕ್, ಮೊಣ್ಣಪ್ಪ, ಕುಂಡ್ರಂಡ ವಾಸು ಇತರ ಪ್ರಮುಖ ಗ್ರಾಮಸ್ಥರು ಹಾಜರಿದ್ದರು.