ಮಡಿಕೇರಿ, ಜ. 23: ಮಡಿಕೇರಿ ನಗರ ಜಾತ್ಯತೀತ ಜನತಾದಳದ ಸಮಾನ ಮನಸ್ಕರ ಸಮನ್ವಯ ಸಮಿತಿಯೊಂದು ರಚನೆಯಾಗಿದ್ದು, ಅಧ್ಯಕ್ಷರಾಗಿ ರಾಜ್ಯ ಯುವ ಜೆಡಿಎಸ್ ಘಟಕದ ಕಾರ್ಯದರ್ಶಿ ಹಾಗೂ ಜೆಡಿಎಸ್ ನಗರಾಧ್ಯಕ್ಷ ಬಿ.ವೈ. ರಾಜೇಶ್ ಯಲ್ಲಪ್ಪ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಬಂಟರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ನಾರಾಯಣ ರೈ, ಬೋಯಿಕೇರಿಯ ಹಮೀದ್, ಸಿ.ಟಿ. ಮಾದಪ್ಪ, ಚಂದ್ರ, ಕೊರಗಪ್ಪ, ಇಬ್ರಾಹಿಂ, ಉಪಾಧ್ಯಕ್ಷರಾಗಿ ಸಂದೀಪ್ ಮರಗೋಡು, ಬಶೀರ್, ನಗರಸಭಾ ಸದಸ್ಯರಾದ ಸಂಗೀತ ಪ್ರಸನ್ನ, ಲೀಲಾ ಶೇಷಮ್ಮ, ಮಾಜಿ ಸದಸ್ಯರಾದ ಅಶ್ರಫ್, ಕಡಗದಾಳು ಗ್ರಾ.ಪಂ. ಅಧ್ಯಕ್ಷೆ ನಿಶ್ಮಾ, ಕೆ.ವಿ. ಜಾನ್, ಕಾರ್ಯದರ್ಶಿಗಳಾಗಿ ಹಿಂದುಳಿದ ವರ್ಗದ ಅಧ್ಯಕ್ಷರಾದ ಎನ್.ಸಿ. ಸುನೀಲ್, ನರೇಶ್, ಪವನ್, ಯಶ್ವಂತ್, ಕಾರ್ಯದರ್ಶಿಗಳಾಗಿ ರಂಜಿತ್, ಮಣಿ, ಧನಂಜಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾಗಿ ಎಲ್ಸಿ ಬೇಬಿ, ಗಾಳಿಬೀಡುವಿನ ಗಣೇಶ್, ಸುಖೇಶ್ ಚಂಗ¥್ಪÀ, ಮಹಾ ಪ್ರಧಾನ ಕಾರ್ಯದರ್ಶಿಗಳಾಗಿ ಸುಖೇಶ್ ಶೆಟ್ಟಿ, ದಿಲೀಪ್, ಉಮೇಶ್, ಜಂಟಿ ಕಾರ್ಯದರ್ಶಿಳಾಗಿ ನೌಷದ್, ರವಿ, ಸಹ ಕಾರ್ಯದರ್ಶಿಗಳಾಗಿ ನಂದೀಶ್, ಕಾವೇರಿ ತಮಿಳ್ ಸಂಘದ ಅಧ್ಯಕ್ಷ ವಿಶ್ವನಾಥ ರಾಜ, ಸಂಘಟನಾ ಕಾರ್ಯದರ್ಶಿಗಳಾಗಿ ಗುರು, ಗ್ರಾ.ಪಂ. ಉಪಾಧ್ಯಕ್ಷ ಡೆನ್ನಿ ಬರೋಸ್ ಆಯ್ಕೆಯಾಗಿದ್ದಾರೆ.

ಬಿ.ವೈ. ರಾಜೇಶ್ ಯಲ್ಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಜಾತ್ಯತೀತ ಜನತಾದಳದ ಸಮಾನ ಮನಸ್ಕರ ಸಮನ್ವಯ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.