ಸೋಮವಾರಪೇಟೆ, ಜ. 8: ಜೆಡಿಎಸ್ ಕ್ರೈಸ್ತ ಅಲ್ಪಸಂಖ್ಯಾತ ವಿಭಾಗದ ಸಂಘಟನಾ ಸಭೆ ಸ್ಥಳೀಯ ಖಾಸಗಿ ಹೋಂ ಸ್ಟೇಯೊಂದರಲ್ಲಿ ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವಾ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ, ರಾಜ್ಯಾಧ್ಯಕ್ಷ ವಿಲ್ಸನ್ ರೆಡ್ಡಿ ಭಾಗವಹಿಸಿ ಸಂಘಟನೆಯ ಬಗ್ಗೆ ಪ್ರಮುಖರೊಂದಿಗೆ ಚರ್ಚಿಸಿದರು. ಸಭೆಯಲ್ಲಿ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಆರ್. ಡೇವಿಡ್, ಪ್ರಧಾನ ಕಾರ್ಯದರ್ಶಿಗಳಾದ ಎ.ಆರ್. ಸುರೇಶ್, ಚಾಲ್ರ್ಸ್ ಚಂದ್ರನ್, ಸಂಘಟನಾ ಕಾರ್ಯದರ್ಶಿ ಜಾರ್ಜ್, ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಯುವ ಘಟಕದ ಅಧ್ಯಕ್ಷ ಪ್ರವೀಣ್, ಪ್ರಮುಖರಾದ ಕೆ.ಟಿ. ಪರಮೇಶ್, ಬಗ್ಗನ ಅನಿಲ್, ಜೋಕಿಂ ವಾಸ್, ಮರ್ವಿನ್ ಫೆರ್ನಾಂಡೀಸ್, ಡೆನ್ಜಿಲ್ ಫೆರ್ನಾಂಡೀಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.