*ಸಿದ್ದಾಪುರ, ಜ. 4: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀಮಂಗಲ ಪೆರುಮಕೊಲ್ಲಿ ಸೇತುವೆ ಸಮೀಪದ ಬಟ್ಟೇರ ಕುಟುಂಬಸ್ಥರ ಗದ್ದೆಗೆ ಹೋಗುವ ಸಂಪರ್ಕ ರಸ್ತೆಯು ತೀರಾ ಹಾಳಾಗಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ತಾಲೂಕು ಪಂಚಾಯಿತಿ ಅನುದಾನದಲ್ಲಿ ರಸ್ತೆ ಕಾಮಗಾರಿಯನ್ನು ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ನೇತೃತ್ವದಲ್ಲಿ ಆರಂಭಿಸಲಾಯಿತು. ಈ ರಸ್ತೆ ಕುಸಿದು ಬಿದ್ದರೆ ಬಟ್ಟೀರ ಕುಟುಂಬಸ್ಥರು ಗದ್ದೆ, ಕಾಫಿ ಮಾಡುವದನ್ನೇ ನಿಲ್ಲಿಸಬೇಕಾದ ಪ್ರಸಂಗ ಎದುರಿಸಬೇಕಾಗಿತ್ತು.

ಈ ರಸ್ತೆ ಕಾಮಗಾರಿ ಆರಂಭಿಸುವ ಈ ಸಂದರ್ಭದಲ್ಲಿ ಬಟ್ಟೀರ ಕುಟುಂಬಸ್ಥರಾದ ಕಾಳಪ್ಪ ವೇಣು ನಾಣಯ್ಯ, ಅಪ್ಪಣ್ಣ, ಮಂದಣ್ಣ, ಚೆಟ್ಟಳ್ಳಿ ವಿಎಸ್‍ಎಸ್‍ಎನ್ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಎಸ್. ತಿಮ್ಮಪ್ಪಯ್ಯ, ಗುತ್ತಿಗೆದಾರ ಅಂಬುದಾಸ್ ಹಾಜರಿದ್ದರು.