ಸೋಮವಾರಪೇಟೆ, ಜ. 3: ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಶಾಂತಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ತಾಯಿ-ಮಗುವಿನ ಆರೋಗ್ಯ ಕುರಿತಾದ ಬೀದಿ ನಾಟಕ ನಡೆಯಿತು.

ಕುಶಾಲನಗರದ ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆಯ ಅಧ್ಯಕ್ಷ ಈ. ರಾಜು ಮತ್ತು ತಂಡದವರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಮಾರ್ಗದರ್ಶನದಂತೆ ಬೀದಿ ನಾಟಕದ ಮೂಲಕ ಸಾರ್ವಜನಿ ಕರಲ್ಲಿ ಜಾಗೃತಿ ಮೂಡಿಸಿದರು.

ಕಲಾವಿದರ ತಂಡ ಮಹಿಳೆ ಗರ್ಭಿಣಿಯಾದಾಗ ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮ, ಔಷಧೀಯ ಉಪಯೋಗ, ಹೆರಿಗೆಯಾದ ನಂತರ ಮಗುವಿಗೆ ನೀಡಬೇಕಾದ ಲಸಿಕೆ, ಬಾಣಂತಿ ಯರು ವಹಿಸಬೇಕಾದ ದೈಹಿಕ ಸ್ವಚ್ಛತೆ ಹಾಗೂ ಮೂಢನಂಬಿಕೆಗೆ ಬಲಿಯಾದರೆ ಆಗುವ ಅನಾಹುತಗಳ ಬಗ್ಗೆ ಬೀದಿ ನಾಟಕದ ಮೂಲಕ ತಿಳುವಳಿಕೆ ನೀಡಿದರು.

ಜಾಗೃತಿ ನಾಟಕಕ್ಕೆ ತಾಲೂಕು ಒಕ್ಕಲಿಗರ ಸಂಘದ ಬಾತ್ಮೀದಾರ ಶಾಂತಳ್ಳಿಯ ಕೆ.ಎಸ್. ರಾಮಚಂದ್ರ ಹಾಗೂ ಜಿಲ್ಲಾ ಆರೋಗ್ಯ ನಿರೀಕ್ಷಕ ಯೋಗೇಶ್ ಅವರುಗಳು ಕಂಜರ ಬಾರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಆಶಾ ಕಾರ್ಯಕರ್ತೆಯರು ಹಾಜರಿದ್ದರು.