ಆಲೂರುಸಿದ್ದಾಪುರ, ಜ. 3: ಶನಿವಾರಸಂತೆ ಹೋಬಳಿ ತುಳು ಜಾನಪದ ಒಕ್ಕೂಟದ ಹೋಬಳಿ ಘಟಕ ರಚನೆಯಾಗಿದ್ದು,ಹೋಬಳಿ ಅಧ್ಯಕ್ಷರಾಗಿ ದಯಾನಂದ, ಉಪಾಧ್ಯಕ್ಷರಾಗಿ ಎಸ್.ಎಸ್. ಶಿವಾನಂದ ಹಾಗೂ ಲಲಿತಾ ಶಾಂತಪ್ಪ ಆಯ್ಕೆಯಾಗಿದ್ದಾರೆ. ಕಾರ್ಯಾದರ್ಶಿಯಾಗಿ ರಂಜನ್, ಸಹಕಾರ್ಯದರ್ಶಿಯಾಗಿ ನಿಂಗಪ್ಪ ನಾಯಕ್, ಖಜಾಂಜಿಯಾಗಿ ಜಿ.ಈ. ಮಂಜುನಾಥ್ ಇವರುಗಳನ್ನು ಹಾಗೂ ಶನಿವಾರಸಂತೆ ಹೋಬಳಿಯ ಐದು ಪಂಚಾಯಿತಿಗಳಿಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.