ಶನಿವಾರಸಂತೆ, ಡಿ. 13: ಶನಿವಾರಸಂತೆ ಕಾವೇರಿ ಎಡ್ಲಾ ಸಂಸ್ಥೆಯ ವಾರ್ಷಿಕೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ಗೌಡಳ್ಳಿ ನವ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಕಾಲೇಜಿನವರೆಗೆ 10 ಕಿ. ಮೀ. ಮಿನಿ ಮ್ಯಾರಥಾನ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಎಂ.ಪಿ. ಪ್ರಣೀತ್ ಪ್ರಥಮ, ಎನ್.ಎಸ್. ಭುವನ್ ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಡಿ.ಪಿ. ಗಾನವಿ ಪ್ರಥಮ, ಎಂ.ಸಿ. ರಜನಿ ದ್ವ್ವಿತೀಯ ಸ್ಥಾನ ಪಡೆದರು. ಪ್ರಜ್ವಲ್ ಎಜುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಜಿ. ವಿ. ತಿಮ್ಮಪ್ಪ ಸ್ಪರ್ಧೆಯನ್ನು ಉದ್ಘಾಟಿಸಿದರು. ಟ್ರಸ್ಟ್‍ನ ಕಾರ್ಯದರ್ಶಿ ಜಿ. ಎಂ. ಹೂವಯ್ಯ ಹಾಗೂ ಪ್ರಾಂಶುಪಾಲ ಹೆಚ್.ಎನ್. ದೇವರಾಜ ಹಾಜರಿದ್ದರು.