ಕೂಡಿಗೆ, ಡಿ. 13: ರಬೀಉಲ್ ಅವ್ವಲ್ ತಿಂಗಳು ಮುಸಲ್ಮಾನರ ಪವಿತ್ರವಾದ ಹಾಗೂ ಶ್ರೇಷ್ಟವಾದ ತಿಂಗಳು. ಈ ಪ್ರಯುಕ್ತ ಇಲ್ಲಿನ ಹಿಲಾಲ್ ಮಸೀದಿ, ದಾರುಲ್ ಉಲೂಮ್ ಮದ್ರಸ ಹಾಗೂ ಯೂಸ್ ಅಸೋಸಿಯೇಷನ್ ವತಿಯಿಂದ ಕೂಡಿಗೆಯ ಶಕ್ತಿ ವೃದ್ಧಾಶ್ರಮದಲ್ಲಿ ಹಿರಿಯರಿಗೆ ಅನ್ನ ಹಾಗೂ ವಸ್ತ್ರ ದಾನ ಮಾಡಲಾಯಿತು. ಕುಶಾಲನಗರದ ನುಸ್ರತುಲ್ ಉಲಮಾ ಯೂತ್ ಅಸೋಸಿಯೇಷನ್‍ನ ಕಾರ್ಯದರ್ಶಿ ಹನೀಫ್ ಪದಾಧಿಕಾರಿ ಆಬಿದ್ ಶ್ರೀ ಶಕ್ತಿ ವೃದ್ಧಾಶ್ರಮದ ವ್ಯವಸ್ಥಾಪಕ ಚಂದ್ರು ಮಾತನಾಡಿದರು.

ಈ ಸಂದರ್ಭ ನುಸ್ರತುಲ್ ಉಲಮಾ ಯೂತ್ ಅಸೋಸಿಯೇಷನ್ ಅಧ್ಯಕ್ಷ ಮುಹಮ್ಮದ್ ರಫೀಕ್, ಉಪಾಧ್ಯಕ್ಷ ಅಜೀಜ್, ಸದಸ್ಯರಾದ ಆರಿಫ್, ಸಮೀರ್, ಕಮಾಲ್, ಇಬ್ರಾಹೀಮ್, ಮುಸ್ತು, ಸಾದಿಕ್, ಸಾವುಲ್, ಹಿಲಾಲ್ ಮಸೀದಿಯ ಪ್ರಮುಖರಾದ ಮುಸ್ತಫಾ, ರಫೀಕ್ ಹಾಗೂ ವೃದ್ಧಾಶ್ರಮದ ಸಿಬ್ಬಂದಿ ವರ್ಗದವರು ಇದ್ದರು.