ಶನಿವಾರಸಂತೆ, ನ. 26: ಸಮೀಪದ ಗೋಪಾಲಪುರ ಗ್ರಾಮದ ಬನಶಂಕರಿ ದೇವಾಲಯದಲ್ಲಿ ಇತ್ತೀಚೆಗೆ ಲಕ್ಷದೀಪೋತ್ಸವ ಪ್ರಯುಕ್ತ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಿ, ಶ್ರದ್ಧಾಭಕ್ತಿಯಿಂದ ಪೂಜಿಸಲಾಯಿತು.ಅರ್ಚಕ ಎನ್.ಕೆ. ನಾಗೇಶ್ ಬನಶಂಕರಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಮಾಡಿ ಪೂಜಿಸಿದರು. ಅನ್ನಸಂತರ್ಪಣೆ ಏರ್ಪಡಿಸ ಲಾಗಿತ್ತು. ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಸಿಡಿಮದ್ದಿನ ಪ್ರದರ್ಶನ ಭಕ್ತಾದಿಗಳನ್ನು ರಂಜಿಸಿತು.ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್. ಪ್ರಕಾಶ್, ಉಪಾಧ್ಯಕ್ಷ ಜಿ.ಬಿ. ನಾಗಪ್ಪ, ರಾಜಶೇಖರ್ ಮತ್ತಿತರ ನಿರ್ದೇಶಕರು ಹಾಜರಿದ್ದರು.