ಸುಂಟಿಕೊಪ್ಪ, ಆ.31: ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬೆಟ್ಟದಪುರ ಚಿಕ್ಕನೇರಳೆ ಗ್ರಾಮ (ಸಂತೆಮಾಳ)ದ ನಿವಾಸಿ ನೂರ್‍ಆಹ್ಮದ್ ಅವರ ಪುತ್ರ ಸಮೀರ್ (28) (ಕೆಎ 05ಎಎಫ್-3027) ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಇಂದು ಬೆಳಗ್ಗಿನ ಜಾವ 5.45 ಗಂಟೆಗೆ ಗರಗಂದೂರಿನಿಂದ 3 ಹೋರಿಗಳನ್ನು ತನ್ನ ವಾಹನದಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಹಿಂದೂ ಜಾಗರಣಾ ವೇದಿಕೆಯ ಕಾರ್ಯaಕರ್ತರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆಗೆ ಪಿಎಸ್‍ಐ ಜಯರಾಂ, ಸಿಬ್ಬಂದಿಗಳಾದ ಪುನೀತ್ ಹಾಗೂ ಪುಂಡಾರೀಕಾಕ್ಷ ಹರದೂರಿಗೆ ತೆರಳುತ್ತಿದ್ದಾಗ ಆರೋಪಿ ಗೋವುಗಳನ್ನು ಸಾಗಿಸುತ್ತಿದ್ದುದನ್ನು ಪ್ರಶ್ನಿಸಿದಾಗ ಯಾವದೇ ದಾಖಲಾತಿ ಇಲ್ಲದಿದ್ದು, ಹೋರಿಗಳನ್ನು ಕಡಿದು ಮಾಂಸಮಾಡಿ ಮಾರಾಟ ಮಾಡಲು ಕೊಂಡೊಯ್ಯುವದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಪೊಲೀಸರು ಆರೋಪಿಯನ್ನು ಬಂಧಿಸಿ ವಾಹನವನ್ನು ಮುಟ್ಟುಗೋಲು ಹಾಕಿ ದನಗಳನ್ನು ಮೈಸೂರಿನ ಪಂಜರ್‍ಮೊಲ್ ರವಾನಿಸಿದ್ದಾರೆ.

ಆರೋಪಿ ವಿರುದ್ಧ ಅಕ್ರಮ ಗೋಸಾಗಾಟ ನಿಷೇಧ ಹಾಗೂ ಪ್ರಾಣಿ ಹಿಂಸೆ ಅನ್ವಯ ಮೊಕದ್ದಮೆ ದಾಖಲಿಸಿ ನ್ಯಾಯಂಗ ಬಂಧನಕ್ಕೆ ಒಳಪಡಿಸಿದ್ದಾರೆ.