ಕೂಡಿಗೆ, ಜೂ. 22: ಹೆಬ್ಬಾಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಚೆನ್ನೇನಹಳ್ಳಿ ಜೇನುಕುರುಬರ ಹಾಡಿಯ ಸಮೀಪದ ಅರಣ್ಯ ಪ್ರದೇಶದ ಅಂಚಿನಲ್ಲಿ ಮೇಯುತ್ತಿದ್ದ ಕುರಿಯನ್ನು ಹೆಬ್ಬಾವು ನುಂಗಿರುವ ಘಟನೆ ನಡೆದಿದೆ. ಚೆನ್ನೇನಹಳ್ಳಿ ಹಾಡಿಯ ಕರಿಯ ಎಂಬವರಿಗೆ ಸೇರಿದ ಕುರಿಗಳನ್ನು ಸಮೀಪದ ಅರಣ್ಯದಂಚಿಗೆ ಬಿಡಲಾಗಿತ್ತು.