ಗೋಣಿಕೊಪ್ಪಲು, ಮೇ 17: ಗೋಣಿಕೊಪ್ಪಲು ಗ್ರಾ.ಪಂ.ನಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅನುದಾನದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ ಅನಿಲ ವಿತರಣೆ ಕಾರ್ಯಕ್ರಮವಿತ್ತು. ಆದರೆ, ಕಾರ್ಯಕ್ರಮಕ್ಕೆ ಬಿಜೆಪಿ ಬೆಂಬಲಿತ ಗ್ರಾ.ಪಂ. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಮತ್ತು ಇಬ್ಬರು ಸದಸ್ಯರು ಗೈರು ಹಾಜರಾಗಿದ್ದರು.

8ನೇ ವಾರ್ಡ್‍ನ ಗ್ರಾ.ಪಂ. ಸದಸ್ಯ ಬಿ.ಎನ್. ಪ್ರಕಾಶ್ ಅಧ್ಯಕ್ಷತೆ ಯಲ್ಲಿ ಫಲಾನುಭವಿಗಳಿಗೆ ಉಚಿತ ಅನಿಲ ವಿತರಣೆ ಮಾಡಲಾಯಿತು. ಇದೇ ಸಂದರ್ಭ ಮಾತನಾಡಿದ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೆÇನ್ನಪ್ಪ ಅವರು ರಾಜಕಾರಣ ಮಾಡುವದಿದ್ದರೆ ಚುನಾವಣಾ ಸಂದರ್ಭ ಮಾಡಿ. ಗೆದ್ದ ಮೇಲೆ ಎಲ್ಲ ಪಕ್ಷಗಳೂ ಒಗ್ಗೂಡಿ ಅಭಿವೃದ್ಧಿ ಕಾರ್ಯ ಮಾಡಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿ.ಎನ್. ಪ್ರಕಾಶ್ ಅವರು, ಈವರೆಗೂ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಇಂತಹಾ ಒಂದು ಉತ್ತಮ ಕಾರ್ಯಕ್ರಮವಿರುವದು ಯಾರಿಗೂ ತಿಳಿದಿರಲಿಲ್ಲ. ಇದೀಗ ಪದ್ಮಿನಿ ಪೆÇನ್ನಪ್ಪ ಅವರು ಜಿಲ್ಲೆಯ ಅನಿಲ ರಹಿತರಿಗೆ ಈ ಅವಕಾಶ ಕಲ್ಪಿಸಿದ್ದು, ಮುಂದೆಯೂ ಇವರ ಸೇವೆ ಸಿಗಲಿ ಎಂದು ಹೇಳಿದರು.

ಗೋಣಿಕೊಪ್ಪಲು ಕಾಂಗ್ರೆಸ್ ನಗರಾಧ್ಯಕ್ಷ ಅರವಿಂದ ಕುಟ್ಟಪ್ಪ ಹಾಗೂ ಗ್ರಾ.ಪಂ. ಸದಸ್ಯ ಪ್ರಮೋದ್ ಗಣಪತಿ ಮಾತನಾಡಿ ದರು. ಸಭೆಯಲ್ಲಿ ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ರೇಖಾ ಪೆÇನ್ನಪ್ಪ, ಕಾಡ್ಯಮಾಡ ಚೇತನ್, ಸಮ್ಮದ್, ಲಕ್ಷ್ಮಣ್, ಪಿಡಿಓ ಚಂದ್ರಮೌಳಿ, ಸದಸ್ಯರಾದ ಜಮ್ಮಡ ಸೋಮಣ್ಣ, ಧ್ಯಾನ್ ಸುಬ್ಬಯ್ಯ, ರಾಜಶೇಖರ್, ಮುರುಗ, ಮಂಜುಳಾ, ಕಲೀಮುಲ್ಲಾ ಮುಂತಾದವರು ಪಾಲ್ಗೊಂಡಿದ್ದರು.