ಚೆಟ್ಟಳ್ಳಿ, ಏ. 17: ಚೆಟ್ಟಳ್ಳಿ ಪಂಚಾಯಿತಿ ದಿನಕ್ಕೊಂದು ಸುದ್ದಿಯಾಗುತ್ತÀಲೇ ಇದೆ. ಕಳೆದೆರಡು ದಿನಗಳ ಹಿಂದೆ ವಿದ್ಯುತ್ ಕಂಬದ ವಿಚಾರದಲ್ಲಿ ಹಾಲಿ ಹಾಗೂ ಮಾಜಿ ಸದಸ್ಯರ ನಡುವೆ ಪಂಚಾಯಿತಿಯೊಳಗೆ ತಳ್ಳಾಟ ನಡೆದ್ದದೇ ಸುದ್ದಿಯಾಗಿತ್ತು. ಇಂದು ಬೆಳಿಗ್ಗೆ ಫಲಾನುಭವಿಗಳು ಹಾಗೂ ಹಾಲೀ ಪಂಚಾಯಿತಿ ಅಧ್ಯಕ್ಷರು, ಕೆಲವು ಸದಸ್ಯರು ಚೆಟ್ಟಳ್ಳಿ ಪಂಚಾಯಿತಿ ಮುಂದೆ ದಿಢೀರ್ ಪ್ರತಿಭಟನೆಗೆ ಇಳಿದು, ಅಧಿಕಾರಿಗಳು ಬಂದು ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದ ಹಿನ್ನೆಲೆ ಸಂಜೆ ಬಂದ ಅಧಿಕಾರಿಗಳು ಸಮಾಲೋಚನೆ ನಡೆಸಿದರು. ಬಳಿಕ ಪ್ರತಿಭಟನೆ ಸ್ಥಗಿತಗೊಂಡಿತು.
ಸರಕಾರದ ಆದೇಶದನ್ವಯ 2016-17ನೇ ಸಾಲಿನ ಬಸವ ವಸತಿ ಯೋಜನೆಯಡಿ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲಿ ಮನೆ ನಿರ್ಮಿಸಲು ಫಲಾನುಭವಿಗಳನ್ನು ಆಯ್ಕೆ ಮಾಡಲು ಆದೇಶಿಸಿರುವಂತೆ ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಎಸ್ಸಿಎಸ್ಟಿ, ಅಲ್ಪಸಂಖ್ಯಾತರು ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿ 24 ಫಲಾನುಭವಿಗಳಿಗೆ ಮನೆ ನಿರ್ಮಿಸಲು ಆದೇಶಿಸಲಾಗಿತ್ತು.
ಪಂಚಾಯಿತಿಯ ಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಮೊದಲು 4 ಫಲಾನುಭವಿಗಳ ವಿವರವನ್ನು ಕಳುಹಿಸಿದರಾದರೂ ಇಲಾಖಾ ಮಾಹಿತಿ ಬರಲಿಲ್ಲ. ಜೊತೆಗೆ ಎರಡನೇ ಬಾರಿ 14 ಫಲಾನುಭವಿ ಗಳನ್ನು ಆಯ್ಕೆ ಮಾಡಿ ಕಳುಹಿಸಲಾಗಿ ತ್ತಾದರೂ ಪುನಃ ಎರಡು ಬಾರಿ ಮಾಹಿತಿ ಪಡೆದರು. ಪಂಚಾಯಿತಿ ವ್ಯಾಪ್ತಿಯಲ್ಲಿ ದಾಖಲೆಗಳಿಲ್ಲ. ಎಸ್ಸಿ, ಎಸ್ಟಿಗಳಿಗೆ ಈ ಯೋಜನೆ ದೊರೆಯಲಿಲ್ಲ. ಎರಡೆರಡು ಬಾರಿ ಮಾಹಿತಿ ನೀಡಿದ ಬಗ್ಗೆ 14 ಫಲಾನುಭವಿಗಳ ಮಾಹಿತಿ ಇಲಾಖಾ ವೆಬ್ಸೈಟ್ನಲ್ಲಿ ನಾಪತ್ತೆಯಾಗಿದೆಂದು ಆರೋಪಿಸಿ ಅಧ್ಯಕ್ಷೆ ವತ್ಸಲ, ಸದಸ್ಯರಾದ ಕಂಠಿಕಾರ್ಯಪ್ಪ, ಮೇರಿ ಅಂಬುದಾಸ್, ಮೊಹಮದ್ ರಫಿ, ಮಧುಸೂಧನ್ ಫಲಾನುಭವಿ ಗಳೊಂದಿಗೆ ಇಂದು ಪ್ರತಿಭಟನೆ ನಡೆಸಿದರು.
ಸಂಜೆ 4 ಗಂಟೆಗೆ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಹಾಗೂ ತಾಲೂಕು ವಸತಿ ಯೋಜನೆಯ ನೋಡಲ್ ಅಧಿಕಾರಿ ಪ್ರದೀಪ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಆಗಮಿಸಿದರು. ವಸತಿ ಯೋಜನೆಯ ಬಗ್ಗೆ ಚರ್ಚಿಸಲಾಗಿ ಅಧಿಕಾರಿಗಳು ಹಾಗೂ ಅಭಿವೃದ್ದಿ ಅಧಿಕಾರಿಗಳ ಮಧೆÉ್ಯ ಮಾಹಿತಿ ಕೊರತೆ ಎದ್ದು ಕಾಣುತ್ತಿತ್ತು. ವಾದ- ವಿವಾದಗಳು ನಡೆದು ಫಲಾನುಭವಿ ಗಳನ್ನು ಅಂತಿಮ ಗೊಳಿಸುವ ಅಧಿಕಾರ ಶಾಸಕರಿಗೆ ಇರುವದೆಂದಾಗ ಅಧಿಕಾರಿಗಳ ಮಾತಿಗೆ ಸದಸ್ಯರು ನಾವು ಫಲಾನುಭವಿಗಳಿಗೆ ಉತ್ತರಿಸಲು ಆಗುವದಿಲ್ಲ. ಸಾಮೂಹಿಕ ರಾಜಿನಾಮೆ ನೀಡುತ್ತೇವೆಂದರು. ಫಲಾನುಭವಿಗಳಿಗೆ ವಸತಿ ನೀಡುವ ಬಗ್ಗೆ ಭರವಸೆಯೊಂದಿಗೆ ಎಲ್ಲರೂ ಸೇರಿ ಮನೆ ಪರಿಶೀಲಿಸಲು ತೆರಳಿದರು.
- ಪುತ್ತರಿರ ಕರುಣ್ ಕಾಳಯ್ಯ, ಲೂಹಿಸ್