ವೀರಾಜಪೇಟೆ, ಏ. 16: ಕೊಡಗು ಜಿಲ್ಲಾ ಕೂರ್ಗ್ ಹಿಂದೂ ಮಲೆಯಾಳಿ ಅಸೋಷಿಯೇಶನ್ ಮಾರ್ಗದರ್ಶನದಲ್ಲಿ ವೀರಾಜಪೇಟೆಯಲ್ಲಿ ಮೇ ಮೊದಲನೇ ವಾರದಲ್ಲಿ ಜಿಲ್ಲಾ ಮಟ್ಟದ “ಕೂರ್ಗ್ ಹಿಂದೂ ಮಲೆಯಾಳಿ ಕ್ರಿಕೆಟ್ ಕಪ್ 2017” ಆಯೋಜಿಸಲಾಗಿದೆ ಎಂದು ವೀರಾಜಪೇಟೆ ಸಮಿತಿ ಅಧ್ಯಕ್ಷ ಎನ್.ಎಸ್. ದರ್ಶನ್ ತಿಳಿಸಿದರು.ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಮೇ 5ರಿಂದ 7ರವರೆಗೆ ವೀರಾಜಪೇಟೆ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದೆ. ಪಂದ್ಯಾಟದಲ್ಲಿ ಸುಮಾರು 75ರಿಂದ 100 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಮುದಾಯದ ಕುಟುಂಬಗಳ ನಡುವೆ ಪರಸ್ಪರ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಮಲೆಯಾಳಿ ಸಮುದಾಯಕ್ಕೆ ಸೀಮಿತಗೊಂಡಂತೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಏರ್ಪಡಿಸಲಾಗಿದೆ ಎಂದು ಸಂಘಟನೆಯ ಉಪಾಧ್ಯಕ್ಷ ಸಿ.ಎಂ. ದಿನೇಶ್ ತಿಳಿಸಿದರು.
ಕಾರ್ಯದರ್ಶಿ ಪಿ.ಎಸ್. ಮನೋಜ್ ಕುಮಾರ್ ಮಾತನಾಡಿ ಕ್ರಿಕೆಟ್ ಪಂದ್ಯಾಟಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಮೊ.9448704419, 9740974028 ಸಂಪರ್ಕಿಸಬಹುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕೆ.ಬಿ. ಸುಮೇಶ್, ಡಿ.ಕೆ. ಸುನಿಲ್ ಕುಮಾರ್, ಎಲ್.ಎ. ನವೀನ್ ಉಪಸ್ಥಿತರಿದ್ದರು.