ಮಾನ್ಯರೆ,

ನಾಪೋಕ್ಲುವಿಗೆ ರಾಜ್ಯ ಸರಕಾರದಿಂದ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಆಗಿ ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿರುವದಿಲ್ಲ. ಇದೀಗ ನಾಪೋಕ್ಲು ಸುತ್ತಮುತ್ತ ಜನತೆ ಅಶುದ್ಧ ನೀರಿನ ಸೇವನೆಯಿಂದ ಮಂಜ ಕಾಮಾಲೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪಂಚಾಯಿತಿಯವರು ಗಮನಹರಿಸಿ ಆದಷ್ಟು ಶೀಘ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿ ಪೂರ್ಣಗೊಳಿಸಿ, ನಾಪೋಕ್ಲು ಜನತೆಗೆ ಅದರ ಉಪಯೋಗ ಮಾಡಿಕೊಡಲು ಈ ಮೂಲಕ ವಿನಂತಿಸುತ್ತೇನೆ.

- ಟಿ.ವಿ. ಸೋಮಶೇಖರ್, ನಾಪೋಕ್ಲು.