ಸುಂಟಿಕೊಪ್ಪ, ಅ. 9: ಇಲ್ಲಿನ ವಾಹನ ಚಾಲಕರ ಸಂಘದ ವತಿಯಿಂದ 46 ನೇ ವರ್ಷದ ಆಯುಧ ಪೂಜಾ ಸಮಾರಂಭಕ್ಕೆ ವಾಹನ ಚಾಲಕರ ಸಾರ್ವಜನಿಕ ವೇದಿಕೆ ಸಿದ್ಧಗೊಂಡಿದೆ.

ವಾಹನ ಚಾಲಕರ ಸಾರ್ವಜನಿಕ ವೇದಿಕೆಯಲ್ಲಿ ತಾ. 10 ರಂದು (ಇಂದು) ಸಂಜೆ 7 ರಿಂದ 12 ಗಂಟೆವರೆಗೆ ಬೆಂಗಳೂರಿನ ಮುಖೇಶ್ ಮ್ಯೂಸಿಕ್ಸ್ ಅಂಡ್ ಈವೆಂಟ್ ತಂಡ ದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ತಾ.10 ರಂದು ರಾತ್ರಿ ಮಂಟಪಗಳ ಶೋಭಾಯಾತ್ರೆಯು ಜನಮನ ತಣಿಸಲಿದೆ. ವರ್ಕ್ ಶಾಪ್‍ಗಳ ಅಲಂಕಾರ ಸ್ಪರ್ಧೆ, ಆಟೋರಿಕ್ಷಾ ಅಲಂಕಾರ ಸ್ಪರ್ಧೆ, ಅಂಗಡಿ ಹಾಗೂ ಸರಕಾರಿ ಕಚೇರಿಗಳ ಅಲಂಕೃತ ಸ್ಪರ್ಧೆ, ಲಘು ಮೋಟಾರ್ ವಾಹನಗಳ ಅಲಂಕೃತ ಸ್ಪರ್ಧೆ, ಮಕ್ಕಳ ಮಂಟಪಗಳ ಅಲಂಕೃತ ಸ್ಪರ್ಧೆಗಳಿಗೆ ದಾನಿಗಳು ನಿಡಿದ ಟ್ರೋಫಿ ಬಹುಮಾನಗಳನ್ನು ನಿಡಲಿದ್ದಾರೆ.