ಮಡಿಕೇರಿ, ಅ.9 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ದಶ ಮಂಟಪಗಳ ಶೋಭಾಯಾತ್ರೆ ಸೇರಿದಂತೆ ಆಯುಧ ಪೂಜಾ ಉತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದ್ದು, ಉತ್ಸವದ ಯಶಸ್ವಿ ಆಚರಣೆಗೆ ನಾಡಿನ ಜನತೆ ಸಹಕರಿಸ ಬೇಕೆಂದು ಮಡಿಕೇರಿ ನಗರ ದಸರಾ ಸಮಿತಿ ಮನವಿ ಮಾಡಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ನಗರ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ನಗರಸಭಾ ಅಧ್ಯಕ್ಷೆÀ ಕೂಡಕಂಡಿ ಕಾವೇರಮ್ಮ ಸೋಮಣ್ಣ ಮಾತನಾಡಿ, ನವರಾತ್ರಿ ಉತ್ಸವದ ಆರಂಭದೊಂದಿಗೆ ಇಲ್ಲಿಯವರೆÀಗೆ ಸರ್ವರ ಸಹಕಾರ ದೊಂದಿಗೆ ಕಾರ್ಯಕ್ರಮಗಳು ಅತ್ಯಂತ ವೈಭವಯುತವಾಗಿ ನಡೆದಿದೆ. ಆಯುಧ ಪೂಜೆ ಮತ್ತು ವಿಜಯದಶಮಿಯ ದಿನದ ಕಾರ್ಯಕ್ರಮಗಳಿಗೆ ಅಗತ್ಯ ವ್ಯವಸ್ಥೆ ಮಾಡಿಕೊಂಡಿರುವದಾಗಿ ತಿಳಿಸಿದ ಅವರು ವಿಜಯದಶಮಿ ಯಂದು ರಾತ್ರಿ ಮಂಗಳೂರಿನ ಗುರು ತಂಡದಿಂದ ರಸಮಂಜರಿ ಕಾರ್ಯಕ್ರಮ ಮತ್ತು ಚಲನಚಿತ್ರ ನಟ ದಯಾನಂದ ಅವರ ಕಾರ್ಯಕ್ರಮಗಳು ವಿಶೇಷವಾಗಿ ನಡೆಯಲಿದೆಯೆಂದು ಹೇಳಿದರು.