ಸುಂಟಿಕೊಪ್ಪ, ಆ. 21: ಇಲ್ಲಿನ ಗದೆಹಳ್ಳದ ಸಹಕಾರಿ ಮಹಿಳಾ ಸಂಘದ ನ್ಯಾಯಬೆಲೆ ಅಂಗಡಿಗೆ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಾಗೃತ ದಳದ ಸದಸ್ಯ ವಿ.ಪಿ. ಸುರೇಶ್ ಭೇಟಿ ನೀಡಿ ಪರಿಶೀಲಿಸಿದರು.

ಅಕ್ಕಿ, ಗೋಧಿ ಸೇರಿದಂತೆ ಇತರ ಸಾಮಗ್ರಿಗಳನ್ನು ಶುಚಿತ್ವದಿಂದ ಶೇಖರಿಸಿ ಪಡಿತರ ಚೀಟಿದಾರರಿಗೆ ವಿತರಿಸುವಂತೆ ಸೂಚಿಸಿದರು. ಸರಕಾರವು ಬಡಜನರಿಗಾಗಿ ನೀಡುತ್ತಿರುವ ಅನ್ನಭಾಗ್ಯದ ಶುಚಿತ್ವವನ್ನು ಕಾಪಾಡುವದು ಮುಖ್ಯ ಎಂದರು. ಪ್ರತಿ ತಿಂಗಳ ತಾ. 1 ರಿಂದ 25ನೇ ತಾರೀಖಿನವರೆಗೆ ಪಡಿತರ ಆಹಾರ ಧಾನ್ಯಗಳನ್ನು ವಿತರಿಸಬೇಕು.

ನೂತನವಾಗಿ ಆರಂಭಗೊಳ್ಳಲಿರುವ ಕೂಪನ್ ವ್ಯವಸ್ಥೆಯಲ್ಲಿ ಸಡಿಲಿಕೆ ತರುವ ಬಗ್ಗೆ ರಾಜ್ಯ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ ಎಂದರು. ಗದ್ದೆಹಳ್ಳದ ನ್ಯಾಯ ಬೆಲೆ ಅಂಗಡಿ ಕಾರ್ಯದರ್ಶಿ ಹಾಗೂ ಸಹಾಯಕಿ ಇದ್ದರು.