ಮಡಿಕೇರಿ, ಅ. 28: ಮಡಿಕೇರಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ದಿಢೀರ್ ಭೇಟಿ ಮಾಡಿ ಪರಿಶೀಲನೆ ಹಾಗೂ ರೋಗಿಗಳ ಕುಂದು ಕೊರತೆಯನ್ನು ವಿಚಾರಿಸಿದರು.

ರಕ್ತ ಶೇಖರಣಾ ಘÀಟಕದ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿದರು. ಜಿಲ್ಲಾ ಆಸ್ಪತ್ರೆಗೆ ಬೇಕಾದ ಅಗತ್ಯತೆಗಳ ಬಗ್ಗೆ ಪಟ್ಟಿ ಮಾಡಿ ಸೂಕ್ತ ಪ್ರಸ್ತಾವನೆಯನ್ನು ಒಂದು ವಾರದ ಒಳಗಾಗಿ ನೀಡಲು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಅಜೀeóï ಅವರಿಗೆ ಸೂಚನೆ ನೀಡಿದರು. ಈ ಬಗ್ಗೆ ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವ್ಯವಹರಿಸಿ, ಮಂಜೂರಾತಿ ಸಂಬಂಧ ಪ್ರಯತ್ನ ಪಡಲಾಗುವದು ಎಂದು ತಿಳಿಸಿದರು.

ಜಿಲ್ಲಾ ಹಾಗೂ ತಾಲೂಕು ಮಟ್ಟದ ಆರೋಗ್ಯ ರಕ್ಷಾ ಸಮಿತಿಗಳು ನಿರ್ವಹಿಸುತ್ತಿರುವ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು. ಕಟ್ಟಡ ಕಟ್ಟಲು ನಿಗದಿ ಪಡಿಸಿದ ಸ್ಥಳವನ್ನು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲಿಸಿದ್ದು, ಕಾಮಗಾರಿಗಳ ಬಗ್ಗೆ ನೀಲಿ ನಕಾಶೆ, ಅಂದಾಜು ಪಟ್ಟಿ, ಅನುದಾನ ಲಭ್ಯತೆ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಚರ್ಚಿಸಿದರು.

ನೀರಿನ ಸಮಸ್ಯೆ ಇದ್ದು, ಲಭ್ಯವಿರುವ ಕೊಳವೆ ಬಾವಿಯಿಂದ ಪೈಪ್ ಲೈನ್ ವಿಸ್ತರಣೆಯಾದಲ್ಲಿ ನೀರಿನ ಸಮಸ್ಯೆ ನಿವಾರಣೆ ಮಾಡಬಹುದಾಗಿದೆ ಎಂದು ಡಾ. ಅಜೀeóï ಶಾಸಕರ ಗಮನಕ್ಕೆ ತಂದರು. ಪೈಪ್ ಲೈನ್ ವಿಸ್ತರಣೆ ಬಗ್ಗೆ ನಗರ ಸಭೆಯಿಂದ ಮಾಡಿಸಿಕೊಡಲು ಶಾಸಕರ ಜೊತೆಯಲ್ಲಿದ್ದ ನಗರ ಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಅವರಿಗೆ ಸೂಚಿಸಿದರು. ಈ ಸಂದರ್ಭ ಹಾಜರಿದ್ದ ವಿವಿಧ ವಿಭಾಗಗಳ ವೈದ್ಯರು ಹಾಗೂ ಶುಶ್ರೂಷಕಿಯರೊಂದಿಗೆ ಸಮಾಲೋಚನೆ ನಡೆಸಿದರು.

ನಂತರ ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕ, ಹೆರಿಗೆ ವಿಭಾಗ, ಪುರುಷರ ವಿಭಾಗ, ಕ್ಷ ಕಿರಣ ಕೊಠಡಿ, ಶೌಚಾಲಯ, ತುರ್ತು ನಿಗಾ ಘಟಕ, ಔಷಧಿಗಳ ಪರಿಶೀಲನೆ, ಸ್ವಚ್ಛತೆ ಬಗ್ಗೆ ಪರಿಶೀಲನೆ ಮಾಡಿದರು. ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಸಾರ್ವಜನಿಕರೊಂದಿಗೆ ಸಮಾಲೋಚಿಸಿದರು.

ಈ ಸಂದರ್ಭ ಜಿಲ್ಲಾ ಆಸ್ಪತ್ರೆಯಲ್ಲಿದ್ದ ಪೆÇಲೀಸ್ ಉಪಠಾಣೆಯಲ್ಲಿ ಯಾರೂ ಇಲ್ಲದಿರುವ ಬಗ್ಗೆ ಶಾಸಕರು ಆಕ್ಷೇಪ ವ್ಯಕ್ತ ಪಡಿಸಿದರು. ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ನಾಗರಾಜ್ ಮಧ್ಯಾಹ್ನದ ಬಳಿಕ ಕರ್ತವ್ಯದಲ್ಲಿ ಇಲ್ಲದಿರುವದು ತಿಳಿದು ಬಂದಿದ್ದು, ತುರ್ತು ಸಂದರ್ಭದಲ್ಲಿ ಪೆÇಲೀಸ್ ದೂರು ಆಗದೇ ವೈದ್ಯರು ಚಿಕಿತ್ಸೆ ನೀಡುವಂತಿಲ್ಲ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಲಿದೆ. ಈ ಬಗ್ಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರಲಾಗುವದು ಎಂದರು.