ಚೆಯ್ಯಂಡಾಣೆ, ಸೆ. ೮: ವೀರಾಜಪೇಟೆ ಅನ್ವಾರುಲ್ ಹುದಾ ಹಾಗೂ ಸುನ್ನಿ ಸಂಘ ಕುಟುಂಬಗಳ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ ೧೧ರ ಶುಕ್ರವಾರ ವೀರಾಜಪೇಟೆಯಲ್ಲಿ ಬೃಹತ್ ಮೀಲಾದ್ ಸಂದೇಶ ಜಾಥಾ,ಅಸ್ಮಾಉಲ್ ಹುಸ್ನಾ ರಾತೀಬ್ ನಡೆಯಲಿದೆ.

ಶುಕ್ರವಾರ ಅಪರಾಹ್ನ ೩ ಗಂಟೆಗೆ ಜಾಥಾವು ಪಂಜರ್ ಪೇಟೆಯಿಂದ ಆರಂಭಗೊAಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ದೊಡ್ಡಟ್ಟಿ ಚೌಕಿ, ಗಡಿಯಾರ ಕಂಬ, ಖಾಸಗಿ ಬಸ್ ನಿಲ್ದಾಣ, ಮೀನುಪೇಟೆ ಮೂಲಕ ಸಂಚರಿಸಿ ಅನ್ವಾರ್ ಕ್ಯಾಂಪಸ್ ನಲ್ಲಿ ಸಮಾಪ್ತಿಗೊಳ್ಳಲಿದೆ.

ಸಂಜೆ ೭ ಗಂಟೆಗೆ ಶಾಫಿ ತಂಙಳ್ ವಳಪಟ್ಟಣಂ ನೇತೃತ್ವದಲ್ಲಿ ಅಸ್ಮಾ ಹುಲ್ ಹುಸ್ನಾ ರಾತೀಬ್ ನಡೆಯಲಿದೆ, ಅಧಿಕ ಸಂಖ್ಯೆಯಲ್ಲಿ ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಮೀಲಾದ್ ಜಾಥಾದ ಸ್ವಾಗತ ಸಮಿತಿಯ ಛೇರ್ಮನ್ ಮಹ್ದಿ ಅಹ್ಮದ್ ಅಲ್ ಬುಖಾರಿ ಹಾಗೂ ಕನ್ವೀನರ್ ಶಿಯಾಬ್ ತಂಙಳ್ ಗೋಣಿಕೊಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.