ವೀರಾಜಪೇಟೆ, ಜೂ. ೧೭: ಲಾರಿ ಹಾಗೂ ಕಾರಿನ ನಡುವೆ ವೀರಾಜಪೇಟೆ-ಮಾಕುಟ್ಟ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಒಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ.
ಬೆAಗಳೂರಿನ ಎಸ್.ಆರ್ ನಗರದ ನಿವಾಸಿ ಸಿ.ರೋಹಿತ್ (೨೯) ಎಂಬವರು ಮೃತಪಟ್ಟಿದ್ದು, ಕೇರಳದ ಶಬರಿಮಲೆಗೆ ಹೋಗಿ ಹಿಂತಿರುಗುವಾಗ ಪೆರುಂಬಾಡಿ ಚೆಕ್ಪೋಸ್ಟ್ ಬಳಿ ಅಪಘಾತ ನಡೆದಿದೆ.
೪ಐದನೇ ಪುಟಕ್ಕೆ (ಮೊದಲ ಪುಟದಿಂದ) ಕಾರಿನಲ್ಲಿದ್ದ ಇತರ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ವೀರಾಜಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸಲಾಗಿದೆ. ಕಾರಿನಲ್ಲಿ ಒಟ್ಟು ೪ ಮಂದಿ ಪ್ರಯಾಣಿಸುತ್ತಿದ್ದರು. ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.