ಕೊಡಗಿನ ವಿಭಿನ್ನ ಸಂಸ್ಕçತಿ, ಆಚಾರ-ವಿಚಾರ, ಪಾರಂಪರಿಕ ಕೃಷಿ ಬದುಕಿನ ಉತ್ಸವವೇ ಪುತ್ತರಿ. ಸಾಂಪ್ರದಾಯಿಕ ಹಬ್ಬದ ಆಚರಣೆಯೊಂದಿಗೆ ಪೊಲಿ... ಪೊಲಿಯೇ.. ಬಾ.. ಎಂದು ಧಾನ್ಯಲಕ್ಷಿö್ಮಯನ್ನು ಮನೆಮನೆಗೆ ತುಂಬಿಕೊಳ್ಳುವುದೇ ಈ ಪುತ್ತರಿ ನಮ್ಮೆಯ ವಿಶೇಷ.

ವರ್ಷದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ರೋಹಿಣಿ ನಕ್ಷತ್ರ ಬರುವ ಹುಣ್ಣಿಮೆಯ ದಿನವೇ ಆರಿಸಲಾಗುತ್ತಿರುವ ಈ ಪುತ್ತರಿ ಹಬ್ಬ ಆಚರಣೆಗೆ ತನ್ನದೆ ಆದ ವಿಶೇಷತೆಯಿದೆ.“ಪುತ್ತರಿ”ಎಂದರೆ ಕೊಡವ ಭಾಷೆಯ “ಪುದಿಯ” ಹೊಸತು, “ಅರಿ” ಎಂದರೆ ಅಕ್ಕಿ ಎಂದೂ, ಹೊಸ ಅಕ್ಕಿಯನ್ನು ಮನೆ-ಮನೆಗಳಿಗೆ ತರುವ ಹಬ್ಬವೇ ಈ ಪುತ್ತರಿ ನಮ್ಮೆ.

ವರ್ಷಂಪ್ರತಿ ಕೊಡಗಿನ ಕುಲದೇವರಾದ ಶ್ರೀಪಾಡಿ ಇಗ್ಗುತಪ್ಪ ದೇವನೆಲೆಯಲ್ಲಿ ಪಂಚಾAಗದ ಆಧಾರದ ಮೇಲೆ ಅಮ್ಮಂಗೇರಿಯ ಜೋತಿಷ್ಯರು ಹಾಗೂ ತಕ್ಕ ಮುಖ್ಯಸ್ಥರು ಸೇರಿ ಪುತ್ತರಿ ಆಚರಣೆಯ ದಿನವನ್ನು ಗುರುತಿಸಿದ ದಿನದಂದೇ ಕೊಡಗಿನಾದ್ಯಂತ ಹಬ್ಬವನ್ನು ಸಂಪ್ರದಾಯಬದ್ದವಾಗಿ ಆರಿಸಲಾಗುತ್ತದೆ. ಹಬ್ಬಕ್ಕಿಂತ ಮುಂಚಿತವಾಗಿ ಊರಿನ ಯುವಕರು ಮಂದ್‌ನಲ್ಲಿ ಸೇರಿ ಪುತ್ತರಿ ನಮ್ಮೆಯ ಕೋಲಾಟ್ ಕಲಿಯುವುದು ಸಂಪ್ರದಾಯ ಇದನ್ನು ಈಡ್ ಎಂದೆನ್ನುವರು.

ಪ್ರತೀ ಊರುಊರುಗಳಲ್ಲಿ ಮುಂಚಿತವಾಗಿ ಹಬ್ಬದ ಆಚರಣೆಯ ಸಿದ್ಧತೆಗಳು ನಡೆದರೆ ಊರಿನ ದೇವಾಲಯಕ್ಕೆ ಸಂಬAದಿಸಿದ ಅರ್ಚಕರು ಮನೆ-ಮನೆಗಳಿಗೆ ತೆರಳಿ ದೇವರ ತೀರ್ಥಪ್ರಸಾದವನ್ನು, ಕುಂಬಾರನು ಮಡಕೆಯನ್ನು, ಬಿದಿರುನೇಯುವವನು ಬಿದಿರಿನ ಕುಕ್ಕೆಯನ್ನು ನೀಡಿ ಅಕ್ಕಿ, ಬೆಲ್ಲ, ಬಾಳೆ, ಉಪ್ಪು, ಎಣ್ಣೆ, ಪುತ್ತರಿ ಗೆಣಸನ್ನು ಪಡೆದು ಹಬ್ಬ ಆಚರಿಸುತ್ತಿದ್ದ ಕಾಲವೇ ಒಂದಿತ್ತು.

ಈ ವರ್ಷ ಡಿಸೆಂಬರ್ ೪ ರಂದು ರೋಹಿಣಿ ನಕ್ಷತ್ರ ಬರುವುದರಿಂದ ಅಂದು ಸಂಜೆ ಕೊಡಗಿನಲ್ಲಿ ಹಬ್ಬಾಚರಣೆ ನಡೆಯಲಿದೆ. ಫಲಹಾರದ ಜೊತೆಗೆ ಬೇಯಿಸಿದ ಪುತ್ತರಿ ಗೆಣಸನ್ನು ಸವಿದು ದೇವರನೆಲೆಯಲ್ಲಿ ಪುತ್ತರಿ ನಮ್ಮೆ ಅಂಗವಾಗಿ ವರ್ಷದ ಧಾನ್ಯವನ್ನು ತರಲು ಭತ್ತದ ಗದ್ದೆಗೆ ಕದಿರು ತೆಗೆಯಲು ಹೋಗುವ ಬಗ್ಗೆ ಹಿರಿಯರು ದೇವರನೆಲೆಯಲ್ಲಿ ಬೇಡಿಕೊಳ್ಳುವರು. ನಂತರ ದುಡಿಕೊಟ್ಟ್ ಹಾಡಿನೊಂದಿಗೆ ತೆರಳುವಾಗ ಮಹಿಳೆಯೊಬ್ಬಳು ಮುಂದೆ ದೇವರದೀಪವನ್ನು ಹಿಡಿದು ತೆರಳಿದರೆ ಬಿದಿರಿನ ಕುತ್ತಿಯನ್ನು ಹೆಗಲ ಮೇಲೆ ಹಿಡಿದ ಬಿಳಿಯ ಕುಪ್ಪಸ ತೊಟ್ಟ ವ್ಯಕ್ತಿ ದುಡಿಕೊಟ್ಟ್ ಹಾಡಿನಜೊತೆ ಸಂಪ್ರದಾಯದ ವಾಲಗ (ವಾದ್ಯ)ದೊಂದಿಗೆ ಕಲ್ಲೋಣಿ(ಕಲ್ಲಾಸಿನ ದಾರಿ)ಯಲ್ಲಿ ಗದ್ದೆಗೆ ತೆರಳಿ ಗಾಳಿಗೆ ಗುಂಡು ಹಾರಿಸಿ ೯.೪೦ಕ್ಕೆ ಸರಿಯಾಗಿ ಗದ್ದೆಯಲ್ಲಿ ಬೆಳೆದ ಭತ್ತದ ಕದಿರನ್ನು ಕುಯಿದು ಎಲ್ಲರಿಗೂ ನೀಡಿ “ಪೊಲಿಪೊಲಿಯೇ....ಬಾ...ಇಗ್ಗುತಪ್ಪಂಡ ಭಂಡಾರಕೆಟ್ಟ್ ಪೊಲಿಯೇ ಬಾ...'' ಬೈತೂರಪ್ಪಂಡ ಭಂಡಾಕೆಟ್ಟ್ ಪೊಲಿಯೇ ಬಾ.. ಕಾವೇರಮ್ಮೆರ ಭಂಡಾರ ಕೆಟ್ಟ್ ಪೊಲಿಯೇ ಬಾ..ಎಂದು ದೇವರನ್ನು ನೆನೆಯುತ್ತಾ ದುಡಿಕೊಟ್ಟ್ಹಾಡಿನೊಂದಿಗೆ ಐನ್‌ಮನೆಗೆ ತೆರಳುವರು.ಮಹಿಳೆಯೊಬ್ಬಳು ಅಕ್ಕಿಹಾಕಿ ಕುತ್ತಿಯಲ್ಲಿ ಭತ್ತದ ತೆನೆಯೊಂದಿಗೆ ತೆರಳಿದ ವ್ಯಕ್ತಿಯ ಕಾಲಿಗೆ ನೀರು ಹಾಕಿ ತೊಳೆದು ಹಾಲುಕುಡಿಸಿ ಐನ್‌ಮನೆಯೊಳಗೆ ಬರಮಾಡಿಕೊಳ್ಳುವರು.

ಮಾರನೆಯ ದಿನದಿಂದ ಕೆಲವೆಡೆ ಊರಿನ ಹಲವು ಕುಟುಂಬಗಳು ಸೇರಿ ಪುತ್ತರಿ ಹಬ್ಬದ ಪ್ರಯುಕ್ತ ದೇವಾಲಯದಲ್ಲಿ ಪುತ್ತರಿಹಾಡು, ನಿಗದಿತ ದಿನದಂದು ಊರಿನವರೆಲ್ಲ ಸೇರಿ ಆಯಾಯ ಕುಟುಂಬದ ಐನ್‌ಮನೆಗಳಲ್ಲಿ ಮನೆಪಾಟ್ ಏರ್ಪಡಿಸುವರು.

ಕೆಲವು ದಿನದ ನಂತರ ಊರ್‌ಮಂದ್‌ನಲ್ಲಿ ಊರಿನವರೆಲ್ಲ ಸೇರಿ ಊರ್ರೊಮೆ ಯನ್ನು ಏರ್ಪಡಿಸಿ ಹಿರಿಯರು ದೇವನೆಲೆಯಲ್ಲಿ ವಿಶೇಷ ಭೋಜನವನ್ನಿಟ್ಟು ಒಳಿತನ್ನು ಮಾಡಲೆಂದು ದೇವರಲ್ಲಿ ಬೇಡಿಕೊಳ್ಳುವರು. ಪುರುಷರು, ಮಹಿಳೆಯರು, ಮಕ್ಕಳೆಲ್ಲ ಊರುಮಂದ್‌ನಲ್ಲಿ ಸೇರಿ ಸುತ್ತಲೂ ಕುಳಿತು ಹಬ್ಬದ ವಿಶೇಷ ಬೋಜನವನ್ನು ಸವಿಯುವರು. ನಂತರ ನಾಡ್‌ಮಂದ್‌ನಲ್ಲಿ ಸುತ್ತಲಿನ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ವಿವಿಧ ಸಂಪ್ರದಾಯದೊAದಿಗೆ ಕೋಲಾಟ್, ಬೊಳಕಾಟ್ ಪ್ರದರ್ಶನ ನಡೆಯುವುದು.

“ಬಪ್ಪಕ ಪುತ್ತರಿ ಬಣ್ಣತೇ ಬಾತ್-ಪೋಪಕ ಪುತ್ತರಿ ಎಣ್ಣತೇ ಪೋಚಿ, ಪೊಯಿಲೇ.. ಪೊಯಿಲೇ...' ಎಂದು ಪುರುಷರು ಮಂದ್‌ನ ಸುತ್ತಲೂ ಕೋಲ್ ಹೊಡೆಯುತ್ತಾ ಹಬ್ಬದ ಸಂಭ್ರಮದ ನಡುವೆ ಹಬ್ಬ ಹೇಳದೇ ಹೋಯಿತೆಂದು ಜಾನಪದ ಹಾಡಿನಲ್ಲಿ ಹೇಳುತ್ತಾ ಕೋಲು ಹೊಡೆದು ದೇವರ ನೆಲೆಯಲ್ಲಿ ಕೋಲು ಒಪ್ಪಿಸಿ ಹಬ್ಬಕ್ಕೆ ತೆರೆ ಎಳೆಯುವರು.

-ಪುತ್ತರಿರ ಕರುಣ್ ಕಾಳಯ್ಯ,

ಚೆಟ್ಟಳ್ಳಿ