ಮಡಿಕೇರಿ, ನ. ೨೧ : ಕೆಂಗೇರಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವವರನ್ನು ಟಾರ್ಗೆಟ್ ಮಾಡಿಕೊಂಡು ದರೋಡೆ ನಡೆಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಗ್ಯಾಂಗ್ ಅನ್ನು ಮಂಡ್ಯ ಪೊಲೀಸರು ಪತ್ತೆಹಚ್ಚಿದ್ದಾರೆ. ವೀರಾಜಪೇಟೆಯ ಅಬ್ದುಲ್ ಜಲೀಲ್ ಸೇರಿದಂತೆ ಅನೇಕರು ಈ ಗ್ಯಾಂಗ್‌ನಿAದ ವಂಚನೆಗೊಳಗಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬAಧಿತರನ್ನು ಕಿರಣ್, ಕುಶಾಲ್ ಬಾಬು ಮತ್ತು ಗೋಕುಲ್ ಎಂದು ಗುರುತಿಸಲಾಗಿದೆ. ಮೂವರೂ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿAಗ್ ಕಾಲೇಜಿನ ವಿದ್ಯಾರ್ಥಿಗಳು. ಕಾರಿನಲ್ಲಿ ಡ್ರಾಪ್ ಕೊಡುತ್ತೇವೆ ಎಂದು ಹೇಳಿ ಹತ್ತಿಸಿಕೊಂಡು, ಮಂಡ್ಯದ ನಿರ್ಜನ ಪ್ರದೇಶಕ್ಕೆ ತಲುಪುತ್ತಿದ್ದಂತೆಯೇ ಕುತ್ತಿಗೆಗೆ ಹಗ್ಗ ಹಾಕಿ ಬೆದರಿಸಿ ಫೋನ್ ಮತ್ತು ನಗದು ದರೋಡೆ ಮಾಡುತ್ತಿದ್ದ ಗ್ಯಾಂಗ್ ಬಳಿಕ ಫೋನ್ ಪೇ ಮೂಲಕ ಬೆಟ್ಟಿಂಗ್ ಆ್ಯಪ್‌ಗಳಿಗೆ ಹಣ ವರ್ಗಾಯಿಸುತ್ತಿದ್ದರು ಎಂದು ಬಹಿರಂಗವಾಗಿದೆ.

ಹೊರರಾಜ್ಯದ ಕಾರನ್ನು ಬಾಡಿಗೆ ಪಡೆದು ದರೋಡೆ ನಡೆಸಿದ ಮಾಹಿತಿ ಕೂಡಾ ಬೆಳಕಿಗೆ ಬಂದಿದ್ದು ದರೋಡೆ ಮಾಡಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿಗಳು, ಪೋಷಕರಿಗೆ ಪಿಜಿಯಲ್ಲಿ ಇದ್ದೇವೆ ಎಂದು ಹೇಳಿ ವಾಸ್ತವದಲ್ಲಿ ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.

ವೀರಾಜಪೇಟೆಯ ಅಬ್ದುಲ್ ಜಲೀಲ್ ಹಾಗೂ ಮೈಸೂರಿನ ಯತೀಂದ್ರ ಎಂಬವರ ಮೇಲೆ ನಡೆದ ದರೋಡೆ ಈ ಗ್ಯಾಂಗ್‌ನ ಕೆಲಸವೆಂಬುದು ದೃಢಪಟ್ಟಿದೆ. ತೂಬಿನಕೆರೆ ಮತ್ತು ಕರಿಘಟ್ಟದ ಬಳಿ ನಡೆದ ಪ್ರಕರಣಗಳಲ್ಲಿ ಸಿಕ್ಕ ತಾಂತ್ರಿಕ ಸುಳಿವುಗಳನ್ನು ಆಧರಿಸಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.