ಸೋಮವಾರಪೇಟೆ, ನ. ೧೧: ಇಲ್ಲಿನ ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ಗೆ ಜಿಲ್ಲಾ ಗವರ್ನರ್ ಶಬರಿ ಕಡಿದಾಳ್ ಭೇಟಿ ನೀಡಿದರು.

ಐಗೂರಿನಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಥೆಯ ಪ್ರತಿನಿಧಿಗಳು ಸಂತೋಷದಿAದ ಸಮಾಜ ಸೇವೆಯನ್ನು ಮಾಡಿದರೆ ಅದು ಜನರ ಹೃದಯ ತಟ್ಟುತ್ತದೆ. ಆಗ ಮಾತ್ರ ನಾವು ಮಾಡಿದ ಸೇವೆಗೆ ಮೌಲ್ಯ ಸಿಗಲಿದೆ. ಸಂಸ್ಥೆ ಯಶಸ್ವಿಯಾಗಬೇಕಾದಲ್ಲಿ ಅದಕ್ಕೆ ಎಲ್ಲ ಸದಸ್ಯರು ಕೈ ಜೋಡಿಸಬೇಕು.

ವರದಿ ಸಾಲಿನಲ್ಲಿ ಸಾಕಷ್ಟು ಸೇವೆಗಳನ್ನು ಮಾಡುತ್ತಿರುವ ಸಂಸ್ಥೆ ಮುಂದೆಯೂ ಇನ್ನಷ್ಟು ಕೆಲಸ ಮಾಡಬೇಕೆಂದರು.

ಕಾರ್ಯಕ್ರಮಕ್ಕೂ ಮುನ್ನ ಬೇಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನರ್ ವೀಲ್ ಸಂಸ್ಥೆಯ ಹ್ಯಾಪಿ ಸ್ಕೂಲ್ ಯೋಜನೆಯ ಮೂಲಕ ನೀಡಿರುವ ಸೌಲಭ್ಯಗಳನ್ನು ಉದ್ಘಾಟಿಸಿದ ಅವರು, ಶಾಲೆಗಳಲ್ಲಿ ಮಾಡಿದ ಯೋಜನೆಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದು ಭವಷ್ಯದ ಭಾರತಕ್ಕೂ ಪೂರಕವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ವಹಿಸಿದ್ದರು. ಈ ಸಂದರ್ಭ ಉಪಾಧ್ಯಕ್ಷೆ ಲತಾ ಮಂಜು, ಪ್ರಧಾನ ಕಾರ್ಯದರ್ಶಿ ಸುವಿನಾ ಕೃಪಾಲ್, ಖಜಾಂಚಿ ಆಶಾ ಮೋಹನ್, ಐಎಸ್‌ಒ ನಂದಿನಿ ಗೋಪಾಲ್ ಹಾಗೂ ಸಖಿ ಬುಲೆಟಿನ್ ಸಂಪಾದಕಿ ಅಮ್ರಿತಾ ಕಿರಣ್ ಇದ್ದರು.

ಇದೇ ಸಂದರ್ಭ ಕಳೆದ ಒಂದು ವರ್ಷದ ಸಾಧನೆಯ ಸಖಿ ಬುಲೆಟಿನ್ ಬಿಡುಗಡೆ ಮಾಡಲಾಯಿತು.