ಮಡಿಕೇರಿ, ಅ. ೨೧: ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾ ಡುವಲ್ಲಿ ಪೊಲೀಸರ ಕಾರ್ಯ ಶ್ಲಾಘನೀಯವಾದದ್ದು ಎಂದು ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಹೇಳಿದರು.
ಕೊಡಗು ಜಿಲ್ಲಾ ಪೊಲೀಸ್ ವತಿ ಯಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಎಲ್ಲರ ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಪೊಲೀಸರು ತಮ್ಮ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ. ಸಮಾಜ ಭದ್ರತೆಗಾಗಿ ಪ್ರಾಣತ್ಯಾಗ ಮಾಡಿದ ಪೊಲೀಸರನ್ನು ಸ್ಮರಿಸಬೇಕಿದೆ. ಜೊತೆಗೆ ಅವರ ಕುಟುಂಬದವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಕರ್ತವ್ಯದಲ್ಲಿದ್ದ ಸಂದರ್ಭ ಹುತಾತ್ಮರಾದ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸ್ಮರಿಸಿದರು.
೨೦೨೪-೨೫ರ ಅವಧಿಯಲ್ಲಿ ದೇಶದ ಕಾನೂನು ಸುವ್ಯವಸ್ಥೆ ಕಾಪಾಡುವ ಸಂದರ್ಭ ರಾಷ್ಟçದಲ್ಲಿ ೧೯೧ ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹುತಾತ್ಮರಾಗಿದ್ದು, ಇವರಲ್ಲಿ ೮ ಮಂದಿ ಕರ್ನಾಟಕ ರಾಜ್ಯದವರಾಗಿದ್ದಾರೆ. ಮೆಬೂಬ್ ಗುಡ್ಡಲಿಲ್ ಪಿಎಸ್ಐ (ಬೆಂಗಳೂರು ನಗರ), ವೆಂಕಟಾಚಲಪತಿ ಕೆ.ಎನ್ ಎಎಸ್ಐ (ಕೆಜಿಎಫ್), ಗಿರೀಶ್ ಎಸ್ ಎಆರ್ಎಸ್ಐ (ಡಿಎಆರ್ ತುಮಕೂರು), ಬಸವರಾಜ ಎಂ (ಬೆಂಗಳೂರು ಜಿಲ್ಲೆ), ನಿಂಗರಾಜ್ ಟಿ.ಎಸ್. (ಡಿಎಆರ್ ತುಮಕೂರು ಜಿಲ್ಲೆ), ಪ್ರಕಾಶ್ ಬಿ.ಯು (೧೧ನೇ ಪಡೆ ಕೆಎಸ್ಆರ್ಪಿ ಹಾಸನ), ಮಹೇಶ್ ಎನ್.ಆರ್. (ಬೆಂಗಳೂರು ನಗರ) ಹಾಗೂ ರಾಮಪ್ಪ ಪೂಜಾರಿ (ಡಿಎಆರ್ ದಾವಣಗೆರೆ ಜಿಲ್ಲೆ) ಇವರು ಸೇರಿದ್ದಾರೆ ಎಂದು ತಿಳಿಸಿದರು.
ರಾಷ್ಟçದ ಆಂತರಿಕ ಭದ್ರತೆಯಲ್ಲಿ ಹಾಗೂ ಶಾಂತಿ-ಸುರಕ್ಷತೆ ಕಾಪಾಡಿ ಸಮಾಜ ಘಾತುಕ ಶಕ್ತಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ ಎಂದು ಎಸ್ಪಿ ಹೇಳಿದರು.
ಪೊಲೀಸ್ ಹುತಾತ್ಮರ ದಿನದ ಕಾರ್ಯ ಕ್ರಮದಲ್ಲಿ ಪೆರೆಡ್ ಕಮಾಂಡರ್ ಆರ್.ಪಿ. ಗಣೇಶ್ ಅವರು ಗೌರವ ವಂದನೆ ಸಲ್ಲಿಸಿ, ಮುಖ್ಯ ಅತಿಥಿಗಳಿಂದ ಅನುಮತಿ ಪಡೆದರು.
ಬಳಿಕ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ಉಪ ಪೊಲೀಸ್ ವರಿಷ್ಠಾ ಧಿಕಾರಿ ಮಹೇಶ್ ಕುಮಾರ್, ಗುಪ್ತ ದಳ ವಿಭಾಗದ ಪೊಲೀಸ್ ನಿರೀಕ್ಷಕ ಐ.ಪಿ. ಮೇದಪ್ಪ, ಜಿಲ್ಲಾ ಪೊಲೀಸ್ ಲಿಪಿಕ ಸಿಬ್ಬಂದಿಗಳ ಪರವಾಗಿ ಪಿ.ಎ. ನಂಜಪ್ಪ, ನಿವೃತ್ತ ಪೊಲೀಸ್ ಅಧಿಕಾರಿಗಳ ಪರವಾಗಿ ಅಪ್ಪಯ್ಯ, ನಿವೃತ್ತ ಸೇನಾಧಿಕಾರಿಗಳ ಪರವಾಗಿ ಮೊಣ್ಣಪ್ಪ, ಜಿಲ್ಲಾ ಕಾರಾಗೃಹ ಪರವಾಗಿ ಸಂಜಯ್ ಜತ್ತಿ, ನಗರಸಭೆ ಪರವಾಗಿ ಅಧ್ಯಕ್ಷೆ ಪಿ. ಕಲಾವತಿ ಹಾಗೂ ಸದಸ್ಯರಾದ ಅನಿತಾ ಪೂವಯ್ಯ, ವಕೀಲರ ಸಂಘದ ಪರವಾಗಿ ಸಿ.ಟಿ. ಜೋಸೆಫ್, ಮಾಧ್ಯಮಗಳ ಪರವಾಗಿ ಚಿನ್ನಸ್ವಾಮಿ, ರೋಟರಿ ಸಂಸ್ಥೆ ಪರವಾಗಿ ಲಲಿತ ರಾಘವನ್, ಲಯನ್ಸ್ ಸಂಸ್ಥೆ ಪರವಾಗಿ ಮದನ್, ವಾಣಿಜ್ಯೋದ್ಯಮಿಗಳ ಸಂಘದ ಪರವಾಗಿ ಸಂತೋಷ್, ಹೊಟೇಲ್ ಅಸೋಸಿಯೇಷನ್ ಪರವಾಗಿ ದಿನೇಶ್, ಕೊಡವ ಸಮಾಜಗಳ ಪರವಾಗಿ ಎಂ.ಪಿ. ಮುತ್ತಪ್ಪ, ಗೌಡ ಸಮಾಜಗಳ ಪರವಾಗಿ ಸೂರ್ತಲೆ ಸೋಮಣ್ಣ, ಮುಸ್ಲಿಂ ಒಕ್ಕೂಟಗಳ ಪರವಾಗಿ ಅಮೀನ್ ಮೊಹಿಸಿನ್, ಪೊಲೀಸ್ ಉಪ ನಿರೀಕ್ಷರ ಪರವಾಗಿ ಗೋವಿಂದರಾಜು, ಬ್ಯಾಂಡ್ ಮಾಸ್ಟರ್ ಚೆನ್ನಕೇಶವ, ನಿಸ್ತಂತು ವಿಭಾಗದ ಪರವಾಗಿ ಧನಂಜಯ, ಮಹಿಳಾ ಪೊಲೀಸರ ಪರವಾಗಿ ಸುಮತಿ, ನಿವೃತ್ತ ಸೇನಾಧಿಕಾರಿಗಳ ಪರವಾಗಿ ಮೇಜರ್ ಕಾರ್ಯಪ್ಪ ಮತ್ತಿತರರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಚ ಸಮರ್ಪಿಸಿ, ಗೌರವ ನಮನ ಸಲ್ಲಿಸಿದರು. ನಂತರ ಪೊಲೀಸ್ ಕವಾಯತು ತಂಡದವರು ಮೂರು ಸುತ್ತು ಕುಶಾಲತೋಪು ಹಾರಿಸಿದರು. ಪೊಲೀಸ್ ಬ್ಯಾಂಡ್ ತಂಡದವರು ರಾಷ್ಟçಗೀತೆ ನುಡಿಸಿದರು. ಬಳಿಕ ಎರಡು ನಿಮಿಷ ಮೌನಾಚರಿಸಲಾಯಿತು.
ಜಿಲ್ಲೆಯ ಎಲ್ಲಾ ಹಂತದ ಪೊಲೀಸ್ ಅಧಿ ಕಾರಿಗಳು, ಇತರರು ಇದ್ದರು, ಪೊಲೀಸ್ ಮುಖ್ಯ ಪೇದೆ ಫಾರೂಕ್ ನಿರೂಪಿಸಿ, ವಂದಿಸಿದರು.