ಶ್ರೀಮAಗಲ, ಅ. ೧೯: ಸ್ವಾತಂತ್ರö್ಯ ಪೂರ್ವದಿಂದ ೨೦೧೯ವರೆಗೂ ಅಭಾದಿತವಾಗಿ ಮುಂದುವರೆದು ಕೊಡವರು ಹಾಗೂ ಜಮ್ಮಾ ಹಿಡುವಳಿದಾರರು ಹೊಂದಿದ್ದ ನಮ್ಮ ಸಂಸ್ಕೃತಿಯ ಭಾಗವಾಗಿರುವ ವಿಶೇಷ ವಿನಾಯಿತಿಯ ಕೋವಿ ಹಕ್ಕು ಇನ್ನು ಮೂರು ವರ್ಷಗಳಲ್ಲಿ ಮೊಟಕುಗೊಳ್ಳಲಿದ್ದು, ಈ ಹಕ್ಕನ್ನು ಹಿಂದಿನAತೆ ಶಾಶ್ವತವಾಗಿ ಉಳಿಸಿಕೊಳ್ಳಲು ಕೊಡವ ಸಮಾಜಗಳು ಸಂಘ ಸಂಸ್ಥೆಗಳು ಎಚ್ಚೆತ್ತುಕೊಂಡು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಈ ಹಕ್ಕು ಕಳೆದುಕೊಂಡರೆ ನಮ್ಮ ಮುಂದಿನ ಪೀಳಿಗೆ ಕ್ಷಮಿಸುವುದಿಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಕರೆ ನೀಡಿದರು.
ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ ೯ನೇ ವರ್ಷದ ೧೦ನೇ ದಿನದ ಚಂಗ್ರಾAದಿ ಪತ್ತಲೊದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಡವ ಜನಾಂಗಕ್ಕೆ ಮತ್ತು ಜಮ್ಮಾ ಹಿಡುವಳಿದಾರರಿಗೆ ನೀಡಿದ್ದ ವಿಶೇಷ ಕೋವಿ ವಿನಾಯಿತಿ ಹಕ್ಕನ್ನು ಪ್ರಶ್ನಿಸಿದ್ದ ವಿಚಾರವಾಗಿ ನಾನು ಸೇರಿದಂತೆ ಜನಾಂಗದ ಹಲವಾರು ಪ್ರಮುಖ ವಕೀಲರು ಹಕ್ಕನ್ನು ಉಳಿಸಿಕೊಳ್ಳುವ ಬಗೆ ನ್ಯಾಯಲಯಕ್ಕೆ ಮನವರಿಕೆ ಮಾಡಿದ್ದೇವೆ. ಆದರೆ ಕೇಂದ್ರ ಸರ್ಕಾರ ೨೦೧೯ರಲ್ಲಿ ಹಳೆಯ ಅಧಿಸೂಚನೆ ತಿದ್ದುಪಡಿ ಮಾಡಿ ಹೊಸ ಅಧಿಸೂಚನೆ ಹೊರಡಿಸಿ ಮುಂದಿನ ೧೦ ವರ್ಷಕ್ಕೆ ಸೀಮಿತವಾಗುವಂತೆ ಅಂದರೆ ೨೦೨೯ ರವರೆಗೆ ಮಾತ್ರ ವಿಶೇಷ ಕೋವಿ ವಿನಾಯಿತಿ ಹಕ್ಕು ಅವಧಿ ನೀಡಿದೆ. ಶಾಶ್ವತವಾಗಿದ್ದ ವಿನಾಯಿತಿ ಹಕ್ಕು ಹೇಗೆ ಬದಲಾಯಿತು. ಈ ಬಗ್ಗೆ ನಾವು ಯಾವುದೇ ಹೊರಾಟವನ್ನು ಮಾಡಲಿಲ್ಲ ಹಾಗೂ ಅದನ್ನು ಪ್ರಶ್ನೆಯನ್ನು ಸಹ ಮಾಡಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು ಇಂತಹ ಪ್ರಮುಖ ವಿಚಾರದ ಬಗ್ಗೆ ನಾವು ಪ್ರಶ್ನೆ ಮಾಡುವ ಶಕ್ತಿಯನ್ನೇ ಕಳೆದುಕೊಂಡರೆ ಸಂಸ್ಕೃತಿ ಉಳಿಯುವುದಿಲ್ಲ ಎಂದರು.
ಇನ್ನೂ ಮೂರು ವರ್ಷಕ್ಕೆ ನಮ್ಮ ಕೋವಿ ಹಕ್ಕು ಸೀಮಿತವಾಗಲಿದೆ, ಕೊಡವ ಮತ್ತು ಜಮ್ಮಾ ಹಿಡುವಳಿದಾರರ ಸಂಸ್ಕೃತಿ ಆಚಾರ ವಿಚಾರಗಳಲ್ಲಿ ಪ್ರಮುಖವಾಗಿರುವ ಕೋವಿ ಹಕ್ಕು ಮೊಟಕುಗೊಂಡರೆ ನಮ್ಮ ಹಕ್ಕು ನಮ್ಮ ಸಂಸ್ಕೃತಿ ಆಚಾರ ವಿಚಾರಗಳಿಗೆ ಧಕ್ಕೆ ಉಂಟಾಗಲಿದೆ. ಇಂತಹ ವಿಚಾರದ ಬಗ್ಗೆ ಒಗ್ಗಟ್ಟಾಗಿ ಪ್ರಶ್ನೆ ಮಾಡಬೇಕು ಹಾಗೂ ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಖಿಲ ಕೊಡವ ೪ಐದÀನೇ ಪುಟಕ್ಕೆ (ಮೊದಲ ಪುಟದಿಂದ)
ಸಮಾಜ, ಕೊಡವ ಸಮಾಜಗಳು, ಸಂಘ ಸಂಸ್ಥೆಗಳು ಕೆಲಸ ಮಾಡಬೇಕೆಂದು ಅವರು ಕರೆ ನೀಡಿದರು.
ಯುನೆಸ್ಕೋ ವರದಿ ಪ್ರಕಾರ ೪೦-೫೦ ವರ್ಷಗಳಲ್ಲಿ ಕೋಟ್ಯಂತರ ಜನರು ಮಾತನಾಡುವ ಕನ್ನಡ ಭಾಷೆಗೆ ಅಪಾಯವಿದೆ ಎಂದು ಹೇಳಿದೆ. ಚಿಕ್ಕ ಜನಾಂಗವಾಗಿರುವ ಕೊಡವ ಭಾಷೆಗೆ ಮತ್ತಷ್ಟು ಅಪಾಯವಿದೆ. ಇದು ಜಾತಿವಾದ ಅಲ್ಲ. ಒಂದು ಭಾಷೆ ಸಂಸ್ಕೃತಿ ಸಂರಕ್ಷಣೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಪ್ರತಿಪಾದಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಅವರು ಕಳೆದ ೯ ವರ್ಷಗಳಿಂದ ಪತ್ತಾಲೋದಿಯ ೧೦ ದಿನದ ಕಾರ್ಯಕ್ರಮ ನಡೆಸಲಾಗುತ್ತಿದೆ.
ಇಂತಹ ಕಾರ್ಯಕ್ರಮದಿಂದ ಸಂಸ್ಕೃತಿಯ ಬೆಳವಣಿಗೆ, ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಹಾಗೂ ಮನೋರಂಜನೆಗೆ ಸಹಕಾರಿಯಾಗುತ್ತದೆ ಎಂದರು.
ದಾನಿ ಅಜ್ಜಮಾಡ ಬಿ. ತಿಮ್ಮಯ್ಯ ಅವರು ಮಾತನಾಡಿ, ಪರಿಸ್ಥಿತಿಗೆ ತಕ್ಕಂತೆ ನಾವು ಸಹ ಬದಲಾಗಬೇಕಾಗಿದೆ, ಕೊಡವ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಹೆಚ್ಚಿನ ಮುತುವರ್ಜಿ ಮತ್ತು ಅಭಿಮಾನ ತೋರಬೇಕಾಗಿದೆ ಎಂದು ಹೇಳಿದರು.
ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೊಟ್ಟೆಯಾಂಡಮಾಡ ವಿಶ್ವನಾಥ್ ಮಾತನಾಡಿ, ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಟಿ. ಶೆಟ್ಟಿಗೇರಿ ಕೊಡವ ಸಮಾಜ ನಿರ್ದೇಶಕ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಸಂಭ್ರಮ ಮಹಿಳಾ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಾಡ ರೇಷ್ಮಾ ಕಾರ್ಯಪ್ಪ ಹಾಜರಿದ್ದರು. ಚಂಗುಲAಡ ಅಶ್ವಿನಿ ಸತೀಶ್ ಪ್ರಾರ್ಥಿಸಿ, ಸಮಾಜದ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ ಸ್ವಾಗತಿಸಿ, ಸಮಾಜದ ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಕಾರ್ಯಕ್ರಮ ನಿರ್ವಹಿಸಿ, ನಿರ್ದೇಶಕರಾದ ಬಾದುಮಂಡ ವಿಷ್ಣು ಕಾರ್ಯಪ್ಪ ವಂದಿಸಿದರು.
ದಾನಿ ಅಜ್ಜಮಾಡ ಬಿ. ತಿಮ್ಮಯ್ಯ ದಂಪತಿ, ಪೌರ ಕಾರ್ಮಿಕ ಸುಂದರ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಜೆ ಟಿ. ಶೆಟ್ಟಿಗೇರಿ ಸಂಭ್ರಮ ಸಾಂಸ್ಕೃತಿಕ ಮಹಿಳಾ ಸಂಘದಿAದ ಮತ್ತು ಟಿ. ಶೆಟ್ಟಿಗೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಇಂದಿನ ಕಾರ್ಯಕ್ರಮ : ಸಂಜೆ ೫ ಗಂಟೆಗೆ ಮಹಿಳೆಯರಿಗೆ ಅಡುಗೆ ಪೈಪೋಟಿ, ೬ ಗಂಟೆಯಿAದ ಬೆಕ್ಕೆಸೊಡ್ಲೂರು ಮಂದತವ್ವ ಸಾಂಸ್ಕೃತಿಕ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.