ಪೊನ್ನಂಪೇಟೆ, ಸೆ. ೧೪: ಸರ್ಕಾರವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಇದೇ ತಿಂಗಳ ೨೨ ರಿಂದ ಆರಂಭಗೊಳ್ಳುವ ಈ ಸಮೀಕ್ಷೆಯಲ್ಲಿ ಕೊಡವ ಮುಸ್ಲಿಮರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಮನವಿ ಮಾಡಿದೆ.
ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ, ಮೊಬೈಲ್ ಫೋನ್ ಬಳಸಿಕೊಂಡು ಡಿಜಿಟಲ್ ತಂತ್ರಜ್ಞಾನದ ಮೂಲಕ ಅಕ್ಟೋಬರ್ ೭ರವರೆಗೆ ನಡೆಯಲಿರುವ ಈ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಹಿಂದುಳಿದ ವರ್ಗಗಳ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ರೂಪಿಸಬೇಕಾದ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಅಗತ್ಯವಿರುವ ಮಾಹಿತಿ ದತ್ತಾಂಶಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುವುದರಲ್ಲಿ ತೀರಾ ಮಹತ್ವದಾಗಿದೆ ಎಂದು ಹೇಳಿದರು. ಸಮೀಕ್ಷೆಯಲ್ಲಿ ಒಟ್ಟು ೬೦ ಪ್ರಶ್ನೆಗಳ ಪಟ್ಟಿಯನ್ನು ತಯಾರಿಸಲಾಗಿದೆ. ಈ ಸಮೀಕ್ಷೆಯಲ್ಲಿ ಜನರ ಅಗತ್ಯ ಮಾಹಿತಿಗಳೂ ಸೇರಿದಂತೆ ಜಾತಿಯ (ಮೊದಲ ಪುಟದಿಂದ) ಹೆಸರನ್ನು ಸ್ಪಷ್ಟವಾಗಿ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಕೊಡವ ಮುಸ್ಲಿಂ ಸಮುದಾಯದವರು ನಮೂನೆಯ ಕಾಲಂ ಸಂಖ್ಯೆ ೮ರಲ್ಲಿರುವ ‘ಧರ್ಮ’ ಕಾಲಂನಲ್ಲಿ ‘ಇಸ್ಲಾಂ’ ಎಂದೂ, ಕಾಲಂ ಸಂಖ್ಯೆ ೯ರಲ್ಲಿರುವ ‘ಜಾತಿ’ ಕಾಲಂನಲ್ಲಿ ಂ೦೭೦೨ ಎಂಬ ಸಂಕೇತ (ಕೋಡ್) ಸಂಖ್ಯೆಯಲ್ಲಿರುವ ‘ಕೊಡವ ಮುಸ್ಲಿಂ’ ಎಂದೇ ಬರೆಸಬೇಕು ಎಂದು ಮನವಿ ಮಾಡಿರುವ ಸೂಫಿ ಹಾಜಿ, ಈ ಸಮೀಕ್ಷೆಯ ನಮೂನೆಯ ಅನುಬಂಧ-೩ಎ ವಿಭಾಗದಲ್ಲಿರುವ ಜಾತಿಗಳಿಗೆ ‘ಉಪಜಾತಿ ‘ ಕಾಲಂ ಇದ್ದರೂ ‘ಕೊಡವ ಮುಸ್ಲಿಂ’ ಜಾತಿಗೆ ಉಪಜಾತಿಗಳ ಹಾಗೂ ಸಮನಾರ್ಥದ ಹೆಸರುಗಳನ್ನು ಬಳಸುವುದು ಅಗತ್ಯವಿಲ್ಲ. ಈ ಕಾರಣದಿಂದ ನಮೂನೆಯ ಕಾಲಂ ಸಂಖ್ಯೆ ೧೦ರಲ್ಲಿರುವ ‘ಉಪಜಾತಿ’ ಕಾಲಂನಲ್ಲಿ ‘ಅನ್ವಯಿಸುವುದಿಲ್ಲ’ ಎಂದು ಬರೆಸುವಂತೆ ಮಾಹಿತಿ ನೀಡಿದರು.
ಕೊಡವ ಮುಸ್ಲಿಮರ ಸಾಮಾಜಿಕ ಅಸ್ತಿತ್ವಕ್ಕೆ ಸಂಬAಧಿಸಿದAತೆ ನಮೂನೆಯ ಕಾಲಂ ಸಂಖ್ಯೆ ೧೫ರಲ್ಲಿ ಕೊಡವ ಮುಸ್ಲಿಮರ ಮಾತೃಭಾಷೆಯನ್ನು ನಮೂದಿಸಬೇಕು. ಈಗಾಗಲೇ ಆಯೋಗ ಸಿದ್ದಪಡಿಸಿರುವ ಮಾತೃಭಾಷೆಗಳ ಆ ಪಟ್ಟಿಯಲ್ಲಿ ಕೊಡವ ಮುಸ್ಲಿಮರ ಮಾತೃಭಾಷೆಯಾದ ‘ಪಯಕ’ ಇರುವುದಿಲ್ಲ. ಆದ್ದರಿಂದ ಸಮೀಕ್ಷೆ ಸಂದರ್ಭ ಮಾತೃಭಾಷೆ ಕಾಲಂನಲ್ಲಿ ಸಂಕೇತ ಸಂಖ್ಯೆ ೧೪ ರಲ್ಲಿರುವಂತೆ ‘ಇತರೆ’ ಎಂದು ಬರೆಸಿ ಆ ಭಾಗದಲ್ಲಿ ಸಮುದಾಯದ ಮಾತೃಭಾಷೆಯಾದ ‘ಪಯಕ’ ಎಂದು ಬರೆಯುವಂತೆ ಸಮೀಕ್ಷೆದಾರರಿಗೆ ಸ್ಪಷ್ಟವಾಗಿ ಹೇಳಬೇಕು ಎಂದು ಕರೆನೀಡಿರುವ ಸೂಫಿ ಹಾಜಿ, ಮನೆಯಲ್ಲಿ ಮಾತನಾಡುವ ತಮ್ಮ ಮಾತೃಭಾಷೆಯನ್ನು ನಮೂದಿಸಲು ಇಚ್ಚಿಸಿದರೆ ಅದನ್ನು ‘ಇತರೆ’ ಕಾಲಂನಲ್ಲಿ ಬರೆಸಲು ಈ ಸಮೀಕ್ಷೆಯಲ್ಲಿ ಆಯೋಗ ಅನುವು ಮಾಡಿಕೊಟ್ಟಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕೆ.ಎಂ.ಎ. ಹಿರಿಯ ಉಪಾಧ್ಯಕ್ಷ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ ಅವರು ಮಾತನಾಡಿ, ವಿಶೇಷವಾಗಿ ಸಣ್ಣ ಸಣ್ಣ ಸಮುದಾಯಗಳು ಮತ್ತು ಅಲ್ಪಸಂಖ್ಯಾತ- ಸೂಕ್ಷö್ಮ ಅಲ್ಪಸಂಖ್ಯಾತ ಸಮುದಾಯಗಳು ಸಾಮಾಜಿಕ ನ್ಯಾಯವನ್ನು ಪಡೆಯುವುದು ಅವರ ಹಕ್ಕಾಗಿವೆ. ಈ ಸಾಮಾಜಿಕ ನ್ಯಾಯ ಹಂಚಿಕೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ವಿವಿಧ ಭಾಗಗಳಲ್ಲಿ ವಾಸವಾಗಿರುವ ಹಾಗೂ ವಿಭಿನ್ನ ವೃತ್ತಿಗಳಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಜನ ಸಮುದಾಯಗಳಲ್ಲಿ ಇರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುವಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗಳ ಕುರಿತಂತೆ ವೈಜ್ಞಾನಿಕ ಅಧ್ಯಯನ ನಡೆಸಲು ಈ ಸಮೀಕ್ಷೆ ಹೆಚ್ಚು ಪ್ರಯೋಜನವಾಗಲಿದೆ. ಆದ್ದರಿಂದ, ಈ ಸಮೀಕ್ಷೆಯ ಕುರಿತಂತೆ ಕಲ್ಪಿತ ವ್ಯಾಖ್ಯಾನಗಳ ಮೂಲಕ ಜಾತಿ-ಜನಾಂಗಗಳ ಬಗ್ಗೆ ಸಮಾಜದಲ್ಲಿ ತಪ್ಪು ಸಂದೇಶ ನೀಡಲು ಯಾರೂ ಮುಂದಾಗಬಾರದು ಎಂದು ಹೇಳಿದರು. ಗೋಷ್ಠಿಯಲ್ಲಿ ಕೆ.ಎಂ.ಎ. ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು ಉಪಸ್ಥಿತರಿದ್ದರು.