ವೀರಾಜಪೇಟೆ, ಸೆ. ೧೪: ಕೊಡವ ಸಂಸ್ಕöÈತಿ, ಭಾಷೆ ಹಾಗೂ ಪರಂಪರೆಯನ್ನು ಪೋಷಿಸಿ ಬೆಳೆಸುವ ಜವಾಬ್ದಾರಿ ಇಂದು ನಮ್ಮೆಲ್ಲರ ಮೇಲಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.
ಬೆಂಗಳೂರಿನ ಕೊಡವ ಸಮಾಜ ಆವರಣದಲ್ಲಿ ಕೊಡವ ಸಮಾಜ ಬೆಂಗಳೂರು ಆಯೋಜಿಸಿದ್ದ ಕೈಲ್ ಪೊಳ್ದ್ ಒತ್ತೋರ್ಮೆ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕೊಡವ ಸಮಾಜದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಕೊಡವ ಸಂಸ್ಕೃತಿ ದೇಶದಲ್ಲೇ ವಿಶಿಷ್ಟವಾದದ್ದು.
ಅದರಲ್ಲೂ ಯುವ ಜನಾಂಗ ನಮ್ಮ ಸಂಸ್ಕöÈತಿ, ಭಾಷೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಿ ಮುಂದಿನ ತಲೆಮಾರಿಗೆ ನಮ್ಮ ವಿಶಿಷ್ಟ ಸಂಸ್ಕöÈತಿಯನ್ನು ಮನವರಿಕೆ ಮಾಡಿ ಬೆಳೆಸುವಂತಹ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಕರವಟ್ಟಿರ ಟಿ. ಪೆಮ್ಮಯ್ಯ, ಚೀಫ್ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು, ಆಡಳಿತ ಮಂಡಳಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.