ಕುಶಾಲನಗರ, ಜು. ೩: ವಚನ
ಸಾಹಿತ್ಯವನ್ನು ಶೋಧಿಸಿ, ಸಂರಕ್ಷಿಸಿ,
ಅಚ್ಚುಹಾಕಿಸುವ ಮೂಲಕ ಕನ್ನಡ
ಸಾಹಿತ್ಯಕ್ಕೆ ಬಳುವಳಿ ನೀಡುವ
ಮೂಲಕ ಕನ್ನಡ ನಾಡನ್ನು
ಕೈಲಾಸ ಮಾಡಿದ ಕೀರ್ತಿ ಫ.ಗು.
ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು
ಅಖಿಲ ಭಾರತ ಶರಣ ಸಾಹಿತ್ಯ
ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ.
ಸೋಮಶೇಖರ್ ಹೇಳಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ
ಪರಿಷತ್ತು ಹಾಗೂ ಕೊಡಗು ವಿವಿ
ಆಶ್ರಯದಲ್ಲಿ ಚಿಕ್ಕ ಅಳುವಾರದ ವಿವಿಯ ಕಾವೇರಿ ಸಭಾಂಗಣದಲ್ಲಿ
ಹಮ್ಮಿಕೊAಡಿದ್ದ ವಚನ ಸಾಹಿತ್ಯ ಪಿತಾಮಹ, ಫ.ಗು. ಹಳಕಟ್ಟಿ ಅವರ ಜನ್ಮ
ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಡಿನ
ಯುವಜನಾಂಗ ಹಾಗೂ ಎಲ್ಲರೂ ವಚನ ಸಾಹಿತ್ಯವನ್ನು ಅಧ್ಯಯನ
ಮಾಡುವ ಮೂಲಕ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು
ಎಂದರು.
ತಾಳೆ ಗರಿಯಲ್ಲಿದ್ದ ವಚನದ ಕಟ್ಟುಗಳನ್ನು ಸಂಗ್ರಹಿಸಲು ಅಪಾರ
ಶ್ರಮಿಸಿದ ಇವರು, ಶಾಲೆಗಳು ಹಾಗೂ ಸಹಕಾರಿ ಸಂಘಗಳನ್ನು ತೆರೆದು
ಅಪಾರ ಮಂದಿ ಕನ್ನಡಿಗರಿಗೆ ಹೊಸ ಬದುಕು ಕೊಟ್ಟ ಅಪ್ಪಟ ಕನ್ನಡಿಗ.
ಇಂತಹ ಆದರ್ಶ ವ್ಯಕ್ತಿಗಳ ಜೀವನ ದರ್ಶನ ಇಂದಿನ ಯುವಕರಿಗೆ
ಮಾದರಿಯಾಗಬೇಕು. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ
ಬದುಕಿಗೆ ತಮ್ಮ ಬದುಕನ್ನೇ ಧಾರೆಯೆರೆದ ಹಳಕಟ್ಟಿ ಇಲ್ಲದಿದ್ದರೆ ವಚನ
ಸಾಹಿತ್ಯ ತನ್ನ ಹೊಳಪು ಕಳೆದುಕೊಳ್ಳುತ್ತಿತ್ತು ಎಂದು ಹೇಳಿದರು.
ಹಾಸನ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಸಿ.ತಾರಾನಾಥ್
ಮಾತನಾಡಿ, ಫ.ಗು. ಹಳಕಟ್ಟಿಯವರ ಸಮಗ್ರ ಜೀವನ ಕೇವಲ ವಚನ
ಸಾಹಿತ್ಯವಲ್ಲ. ನಾಡಿನ ಶ್ರೇಷ್ಠ ಕವಿ ಚೆನ್ನವೀರಕಣವಿ ಅವರು ಬರೆದಂತೆ
ಅವರ ಸತ್ಕಾರ್ಯಗಳು ಸಮಾಜದ ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸಿತ್ತು. ಫ.
ಗು. ಹಳಕಟ್ಟಿ ಅವರ ಕಾರ್ಯ, ಕರ್ಮ, ತೊಡುಗೆ ಸಮನ್ವಯವಾಗಿತ್ತು.
ಅನುಭವ ಹಾಗೂ ಅನುಭಾವದಿಂದ ಕೂಡಿತ್ತು.
ವಚನಗಳಲ್ಲಿ ಇರುವ ವೈಜ್ಞಾನಿಕತೆ, ಧಾರ್ಮಿಕತೆ, ಸ್ತಿçà ಸ್ವಾತಂತ್ರö್ಯ
ಸೇರಿದAತೆ ಜೀವನ ಸಂವಿಧಾನವನ್ನು ಅಧ್ಯಯನ ಮಾಡದ ನಾವುಗಳು
ಇಂದು ಮೊಬೈಲ್ಗಳು ಹಾಗೂ ಸಾಮಾಜಿಕ ಜಾಲತಾಣಗಳ ಹಿಂದೆ
ಬಿದ್ದಿರುವುದು ವಿಪರ್ಯಾಸ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ
ಆಲೂರ ಅವರು ಮಾತನಾಡಿ, ಹನ್ನೆರಡನೇ ಶತಮಾನದ ಕಲ್ಯಾಣದಲ್ಲಿ ನಡೆದ ಕ್ರಾಂತಿಯಿAದಾಗಿ ಹಾಳಾಗಿದ್ದ ವಚನಗಳ ತಾಡೋಲೆಗಳನ್ನು
ಸಂಗ್ರಹಿಸಿ, ಸಂಶೋಧಿಸಿ,ಅಚ್ಚು ಹಾಕಿಸಿ ಲಕ್ಷಾಂತರ ವಚನಗಳನ್ನು
ಜನಮಾನಸಕ್ಕೆ ತಲುಪಿಸಲು ಫ.ಗು.ಹಳಕಟ್ಟಿ ಈ ಶತಮಾನ ಕಂಡ ಶ್ರೇಷ್ಟ
ದಾರ್ಶನಿಕ ಸಂತ ಎಂದು ಬಣ್ಣಿಸಿದರು.
ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ
ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಶರಣರ ವಿಚಾರಧಾರೆಗಳು
ಸರ್ವಕಾಲಕ್ಕೂ ಅತೀತವಾದುದು. ಅಳಿಯುತ್ತಿದ್ದ ವಚನ ಸಾಹಿತ್ಯವನ್ನು
ಉಳಿಸುವಲ್ಲಿ ಹಳಕಟ್ಟಿಯವರು ಶ್ರಮಿಸಿದ್ದರಿಂದಲೇ ಈ ಸಾಹಿತ್ಯವನ್ನು
ಉಳಿಸಿ ಬೆಳೆಸಿ ಜನಮಾನಸದಲ್ಲಿ ಜಾಗೃತಗೊಳಿಸುವ ನಿಟ್ಟಿನಲ್ಲಿ ಸುತ್ತೂರು
ಜಗದ್ಗುರು ಡಾ.ಶ್ರೀ ರಾಜೇಂದ್ರ ಸ್ವಾಮೀಜಿಯವರು ಶರಣ ಸಾಹಿತ್ಯ
ಪರಿಷತ್ತು ರಚಿಸಿ ನಾಡಿನಾದ್ಯಂತ ಇಂತಹ ಮೌಲಿಕ ಕಾರ್ಯಕ್ರಮಗಳನ್ನು
ರೂಪಿಸಿದ್ದಾರೆ ಎಂದರು. ವಿವಿ ಕುಲಸಚಿವರಾದ ಸುರೇಶ್ ಮಾತನಾಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ
ಕಾರ್ಯದರ್ಶಿ ಸೋಮಶೇಖರ ಗಾಂಜಿ, ಹಾಸನ ಜಿಲ್ಲಾ ಶರಣ ಸಾಹಿತ್ಯ
ಪರಿಷತ್ತು ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಅಖಿಲ ಭಾರತ ವೀರಶೈವ
ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಬೆಂಗಳೂರಿನ
ಬಸವ ಬಳಗದ ಪ್ರಮುಖರಾದ ಸರ್ವಮಂಗಳ ಸೋಮಶೇಖರ್,
ಸಾಹಿತಿ ಭಾರಧ್ವಜ್ ಕೆ.ಆನಂದ ತೀರ್ಥ, ಕೊಡಗು ಜಿಲ್ಲಾ ಶರಣ ಸಾಹಿತ್ಯ
ಪರಿಷತ್ತು ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.
ಪರಮೇಶ್ ಇದ್ದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ
ಸ್ವಾಗತಿಸಿದರು. ಕೊಡಗು ವಿವಿ ಉಪನ್ಯಾಸಕ ಡಾ. ಜಮೀರ್ ಅಹಮದ್
ನಿರೂಪಿಸಿದರು.
ವಿವಿಯ ಸಂಶೋಧನಾ ವಿದ್ಯಾರ್ಥಿಗಳಾದ ಶಮಿತಾ, ಸ್ಮಿತಾ ತಂಡ
ವಚನ ಗಾಯನ ನಡೆÀಸಿದರು.