ಶ್ರೀಮಂಗಲ, ಜೂ. ೨೫: ಕೊಡಗಿನ ಘಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದೆ. ಮಂಗಳವಾರ ಸಂಜೆಯಿAದಲೇ ಮುಂದುವರೆದಿರುವ ಮಳೆ ರಾತ್ರಿ ಇಡಿ ಸುರಿದಿದ್ದು ಬುಧವಾರವೂ ಸಹ ಮುಂದುವರೆದಿದೆ.
ಇದರಿAದ ದಕ್ಷಿಣ ಕೊಡಗಿನ ಘಟ್ಟ ಪ್ರದೇಶಗಳಾದ ಬಿರುನಾಣಿ,ಶ್ರೀಮಂಗಲ, ಟಿ-ಶೆಟ್ಟಿಗೇರಿ, ಬಿ. ಶೆಟ್ಟಿಗೇರಿ,ಕುಟ್ಟ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಗಾಳಿ ಸಹಿತ ತೀವ್ರ ಮಳೆ ಸುರಿಯುತ್ತಿದೆ. ಆದರೆ ಪೊನ್ನಂಪೇಟೆ ಗೋಣಿಕೊಪ್ಪಗಳಲ್ಲಿ ಸಾಧಾರಣಕ್ಕಿಂತ ಕಡಿಮೆ ಮಳೆ ಆಗುತ್ತಿದ್ದು ಘಟ್ಟ ಪ್ರದೇಶಗಳಲ್ಲಿ ಮಾತ್ರ ಕುಂಭ ದ್ರೋಣ ಮಳೆ ಮುಂದುವರೆದಿರುವುದು ಪ್ರಾಕೃತಿಕ ವಿಸ್ಮಯ ವಾಗಿದೆ. ಮಳೆಯಿಂದ ಅಲ್ಲಲ್ಲಿ ತೋಡುಗಳು ತುಂಬಿ ಹರಿಯುತ್ತಿದ್ದು ಇಲ್ಲಿನ ಪ್ರಮುಖ ನದಿಗಳಾದ ಲಕ್ಷ್ಮಣತೀರ್ಥ ರಾಮತೀರ್ಥ ಮತ್ತು ಕಕ್ಕಟ್ಟ್ ಪೊಳೆ ನದಿಯಲ್ಲಿ ನೀರಿನ ಮಟ್ಟವೂ ಏರಿಕೆಯಾಗಿದೆ.
ಬಿರುನಾಣಿ- ಹುದಿಕೇರಿ ನಡುವಿನ ಹೈಸೊಡ್ಲೂರು- ಪೊರಾಡು ಸೇತುವೆ ಬಳಿ ರಸ್ತೆಗೆ ಬರೆ ಕುಸಿತವಾಗಿ ರಸ್ತೆಯ ಅರ್ಧ ಭಾಗಕ್ಕಿಂತ ಹೆಚ್ಚು ಮಣ್ಣು ತುಂಬಿಕೊAಡಿದೆ. ಇದರಿಂದ ಲಘು ವಾಹನಗಳು ಮಾತ್ರ ಸಂಚಾರ ಮಾಡುತ್ತಿದ್ದು ದೊಡ್ಡ ವಾಹನಗಳು ಮತ್ತು ಶಾಲಾ ಬಸುಗಳಿಗೆ ಸಂಚಾರ ಕಡಿತವಾಗಿದೆ. ತೀವ್ರ ಮಳೆಯಿಂದ ರಸ್ತೆಗಳಲ್ಲಿ ನದಿ ತೋಡಿನಂತೆ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತ್ರಾಸ ದಾಯಕವಾಗಿ ಕಂಡುಬAದಿದೆ. ಈ ಭಾಗದಲ್ಲಿ ತೀವ್ರವಾಗಿ ಮಳೆ ಸುರಿಯುತ್ತಿದ್ದರೂ ಶಿಕ್ಷಣ ಇಲಾಖೆ ತಡವಾಗಿ ಬುಧವಾರ ಬೆಳಿಗ್ಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ಬಹಳಷ್ಟು ಕಡೆ ಶಾಲಾ ಬಸುಗಳು ಗ್ರಾಮೀಣ ಭಾಗಕ್ಕೆ ತೆರಳಿದ್ದರಿಂದ, ಶಾಲಾ ಬಸ್, ಖಾಸಗಿ ಬಸ್ಸು ಅವಲಂಭಿಸಿ ಮಕ್ಕಳು ಎಂದಿನAತೆ ಗಾಳಿ ಮಳೆಯ ನಡುವೆ ಶಾಲೆಗೆ ತೆರಳಿದರು. ಶಿಕ್ಷಣ ಇಲಾಖಾಧಿಕಾರಿಗಳು ತಡವಾಗಿ ರಜೆಯ ಬಗ್ಗೆ ತೆಗೆದುಕೊಂಡ ನಿರ್ಧಾರದಿಂದ ಶಾಲಾ ಮಕ್ಕಳು ಹಾಗೂ ಪೋಷಕರು ಪರದಾಡುವಂತೆ ಪರಿಸ್ಥಿತಿ ಎದುರಾಗಿತ್ತು. ಇದರಿಂದ ಶಾಲೆಯ ಆಡಳಿತ ಮಂಡಳಿ ಸಹ ಗೊಂದಲಕ್ಕೆ ಈಡಾಗಿ ಸಮಸ್ಯೆ ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹುದಿಕೇರಿಯ ಸಮೀಪ ಕೋಣಗೇರಿ ಗ್ರಾಮದ ಕಾಡ್ಯಮಾಡ ಕಿರಣ್ ಅವರ ಮನೆಯ ಸಮೀಪ ಬರೆ ಕುಸಿತವಾಗಿ ಮನೆಗೆ ಹಾನಿಯಾಗಿದೆ.ಬಿರುನಾಣಿ-ಪರಕಟಕೇರಿ ಗ್ರಾಮದಲ್ಲಿ ತೀವ್ರ ಮಳೆಯಿಂದ ರಸ್ತೆ ಮಳೆ ಹರಿಯುತ್ತಿರುವ ನೀರಿನ ನಡುವೆ ಶಾಲಾ ಬಸ್, ಖಾಸಗಿ ಬಸ್ ಸಂಚರಿಸುತ್ತಿದ್ದ ದೃಶ್ಯ ಕಂಡು ಬಂದಿತ್ತು.
ಪಾದಚಾರಿಗಳಿಗೆ ಸಂಕಷ್ಟ ಕಡಂಗ: ಕಡಂಗ ಮುಹ್ಯದ್ದಿನ್ ಜುಮಾ ಮಸೀದಿ ಮತ್ತು ಅಂಗನವಾಡಿ ಮುಂಭಾಗದಲ್ಲಿ ರಸ್ತೆಯಲ್ಲಿ ನೀರು ನಿಂತು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಪಾದಚಾರಿಗಳಿಗೆ ಸಂಕಷ್ಟ ಎದುರಾಗಿದೆ
ಈ ತೊಂದರೆಯಿAದ ಮುಕ್ತಿ ಯಾವಾಗ ಎಂದು ಗ್ರಾಮಸ್ಥರು ಅಳಲು ವ್ಯಕಪಡಿಸಿದರು. ಸಂಬAಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಿರಂತರವಾಗಿ ಈ ಸಮಸ್ಯೆ ಎದುರಾಗಿದೆ. ಸ್ಥಳೀಯ ಕಾಕೋಟುಪರಂಬು ಗ್ರಾಮ ಪಂಚಾಯಿತಿಯು ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರಾದ ಹನೀಫ್ ಬೊಳ್ಳುಮಾಡು ಆರೋಪಿಸಿದ್ದಾರೆ. ಶಾಸಕರು ಕೂಡಲೇ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ ಎಂದು ಜಮಾಅತ್ ಪದಾಧಿಕಾರಿಗಳು ತಿಳಿಸಿದ್ದಾರೆ.
ಚೆಯ್ಯಂಡಾಣೆ: ಕಳೆದ ಮೂರು ದಿನಗಳಿಂದ ಈ ವ್ಯಾಪ್ತಿಯಲ್ಲಿ ಆರಿದ್ರಾ ಮಳೆಯ ಆರ್ಭಟ ಜೋರಾಗಿದ್ದು ನದಿನೀರಿನ ಮಟ್ಟದಲ್ಲಿ ಏರಿಕೆಯಾಗಿ ಕಕ್ಕಬ್ಬೆಯಲ್ಲಿ ನದಿ ನೀರಿನ ಪ್ರವಾಹ ರಸ್ತೆಗೆ ಆವರಿಸಿ ಸಂಚಾರ ಸ್ಥಗಿತಗೊಂಡಿದೆ.
ಕಕ್ಕಬ್ಬೆ ಪಟ್ಟಣದಿಂದ ಕುಂಜಿಲ ಪೈನರಿ ದರ್ಗಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಕ್ಕಬ್ಬೆ ನದಿಯ ಪ್ರವಾಹ ಆವರಿಸಿ ಸಂಚಾರ ಸ್ಥಗಿತಗೊಂಡಿದೆ.