ಮಡಿಕೇರಿ, ಜೂ. ೨೫ : ಜಿಲ್ಲೆಯಲ್ಲಿ ಮಂಗಳವಾರ ಸಂಜೆಯಿAದಲೇ ವ್ಯಾಪಕ ಗಾಳಿ-ಮಳೆಯಾಗುತ್ತಿದೆ. ಆದರೆ ಶಿಕ್ಷಣ ಇಲಾಖೆಯ ಸಂಬAಧಿಸಿದ ವಿವಿಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬುಧವಾರ ಬೆಳಿಗ್ಗೆ ೮ ಗಂಟೆಯ ವೇಳೆಗೆ ರಜೆ ಘೋಷಣೆ ಮಾಡಿದ್ದರು. ತಡವಾಗಿ ರಜೆ ಘೋಷಣೆ ಮಾಡಿದ ಹಿನ್ನೆಲೆ ಅದಾಗಲೇ ಶಾಲಾ-ಕಾಲೇಜಿಗೆ ಹೊರಟು ನಿಂತಿದ್ದ ಮಕ್ಕಳು, ಪೋಷಕರು, ಶಾಲಾ ಮಕ್ಕಳನ್ನು ಸಾಗಿಸುವ ವಾಹನ ಮಾಲೀಕ-ಚಾಲಕರು ಗೊಂದಲಕ್ಕೆ ಒಳಗಾಗಿ ಪರದಾಡಬೇಕಾಯಿತು. ಪ್ರಸ್ತುತದ ಸನ್ನಿವೇಶದಲ್ಲಿ ರಜೆ ನೀಡುವ ವಿಚಾರವನ್ನು ಜಿಲ್ಲೆಯಾದ್ಯಂತ ಸುಲಭವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕೃತ ರೀತಿಯ ಪ್ರಕಟಣೆಯೊಂದಿಗೆ ತಿಳಿಸುವುದು ಸುಲಭವಾಗಿದೆ. ಆದರೆ ಅಧಿಕಾರಿಗಳು ತಾವೇ ಗೊಂದಲಕ್ಕೆ ಒಳಗಾದಂತೆ ಶಾಲೆಗೆ ತೆರಳುವ ಸಮಯ ಮುಗಿಯುವ ವೇಳೆಗೆ ರಜೆ ನೀಡುವದರಿಂದ ಸಹಜವಾಗಿ ಎಲ್ಲರೂ ಪರದಾಡುವಂತಾಗುತ್ತದೆ. ಈ ದಿನ ಇದೇ ರೀತಿಯ ವಿಚಾರ ನಡೆದಿದ್ದು, ಈ ಬಗ್ಗೆ ವಿವಿಧೆಡೆ ಜನಾಕ್ರೋಶ ವ್ಯಕ್ತಗೊಂಡಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಗೊಂದಲ ಸೃಷ್ಟಿಯಾಗದೆ ಮುನ್ನೆಚ್ಚರಿಕಾ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಅನುಸರಿಸಬೇಕೆಂಬುದು ಪೋಷಕರ ಆಗ್ರಹವಾಗಿದೆ. .