ಸೋಮವಾರಪೇಟೆ, ಜೂ. ೨೪: ರಾಷ್ಟಿçÃಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್-ಯುಜಿ೨೦೨೫) ಅಖಿಲ ಭಾರತ ಮಟ್ಟದಲ್ಲಿ ೮೪ ಹಾಗೂ ಕರ್ನಾಟಕ ರಾಜ್ಯಕ್ಕೆ ೭ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿರುವ ಪಟ್ಟಣ ಸಮೀಪದ ಚೌಡ್ಲು ಆಲೇಕಟ್ಟೆ ನಿವಾಸಿ ಕೆ.ಜಿ. ನಿಧಿಯನ್ನು ಶಾಸಕ ಮಂತರ್ ಗೌಡ ಸನ್ಮಾನಿಸಿದರು.
ಚೌಡ್ಲು ಗ್ರಾಮದಲ್ಲಿರುವ ವಿದ್ಯಾರ್ಥಿನಿ ಕೆ.ಜಿ. ನಿಧಿ ಅವರ ನಿವಾಸಕ್ಕೆ ತೆರಳಿದ ಶಾಸಕರು, ಆಕೆಯನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ವಿದ್ಯಾರ್ಥಿನಿಯ ಪೋಷಕರಾದ ಮಡಿಕೇರಿ ಜಿಲ್ಲಾ ಸಶಸ್ತç ಮೀಸಲು ಪಡೆಯಲ್ಲಿ ಎಎಸ್ಐ ಆಗಿರುವ ಕೆ.ಹೆಚ್. ಗಣಪತಿ ಹಾಗೂ ಜಕ್ಕನಳ್ಳಿ ಸರ್ಕಾರಿ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿರುವ ಗುಣವತಿ, ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ಎಸ್.ಐ. ಚೇತನ್, ಸೋಮವಾರಪೇಟೆ ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಡಿ.ಯು., ಸ್ಥಳೀಯರಾದ ಚಂಗಪ್ಪ ಅವರುಗಳು ಇದ್ದರು.