*ಗೋಣಿಕೊಪ್ಪ, ಜೂ. ೪ : ರಾಷ್ಟಿçÃಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆ ಹಾಗೂ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಮುಂಗಾರು ಕಾರ್ಯಕ್ರಮ ಬಾಳೆಲೆ ಗ್ರಾಮ ಪಂಚಾಯಿತಿಯ ಸಂಜೀವಿನಿ ಸಭಾಂಗಣದಲ್ಲಿ ನಡೆಯಿತು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ. ವೀರೇಂದ್ರ ಕುಮಾರ್ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬರುವ ರೋಗಭಾದೆಗಳ ಬಗ್ಗೆ ತಿಳಿಸಿದರು. ಗೊಬ್ಬರಗಳ ಬಗ್ಗೆ ಮಾಹಿತಿ ನೀಡಿದರು.

ಪಶು ವೈದ್ಯ ಡಾ. ಸುರೇಶ್ ಪ್ರಾಣಿಗಳಿಗೆ ಬರುವಂತಹ ರೋಗಗಳ ಬಗ್ಗೆ ಮಾಹಿತಿಯಿತ್ತರು. ರೋಗ ಬರದಂತೆ ತಡೆಗಟ್ಟುವ ಔಷಧಿಗಳ ಬಗ್ಗೆ ಮಾಹಿತಿ ನೀಡಿದರು. ಕೆವಿಕೆ ಫಾರಂ ವ್ಯವಸ್ಥಾಪಕಿ ಲಕ್ಷಿ÷್ಮ ನರ್ಸರಿ ಬಗ್ಗೆ ಹಾಗೂ ನೈಸರ್ಗಿಕ ಕೃಷಿ ಬಗ್ಗೆ ಮಾಹಿತಿಯಿತ್ತರು.

ಬಾಳೆಲೆ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಮೀರ ರೈತರಿಗೆ ಸಿಗಬಹುದಾದ ಸೌಲಭ್ಯಗಳ ಬಗ್ಗೆ ತಿಳಿಸಿದರು.