ನಾಪೋಕ್ಲು, ಜೂ. ೪: ಇಲ್ಲಿಗೆ ಸಮೀಪದ ಮರಂದೋಡ ಗ್ರಾಮದ ಕೇಕುಮಾನಿ ಶ್ರೀ ಭಗವತಿ ದೇವಸ್ಥಾನದ ಭದ್ರಕಾಳಿ, ವಿಷ್ಣುಮೂರ್ತಿಯ ದೊಡ್ಡ ಪಟ್ಟಣಿ ಉತ್ಸವವು ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತು. ಉತ್ಸವದ ಅಂಗವಾಗಿ ಊರಿನ ೧೩ ಕುಟುಂಬಗಳ ದೊಡ್ಡ ಮನೆಯಿಂದ ಕಲಿಯಪಾತ್ರೆ ಇಳಿಯುವುದು ಬಳಿಕ ಎತ್ತುಪೋರಾಟ ದೇವಸ್ಥಾನಕ್ಕೆ ಆಗಮಿಸಿ ನಂತರ ಬಾಳೋಪಾಟ್, ಬೊಳಕಾಟ್ ನೆರವೇರಿತು.

ಬೆಳಿಗೆ ಸಾರ್ಥಾವು ಅಯ್ಯಪ್ಪ, ಅಜ್ಜಪ್ಪ ದೇವರ ಕೋಲಾಟ ನಡೆದ ಬಳಿಕ ಭದ್ರಕಾಳಿ ಹಾಗೂ ಪಡಮಾಳಿ ದೇವರ ಕೋಲ, ತಿರುಮುಡಿ ಶ್ರೀ ಭಗವತಿ ದೇವಸ್ಥಾನದವರೆಗೆ ತೆರಳಿ ಮೂಲ ಸ್ಥಾನಕ್ಕೆ ಹಿಂತಿರುಗಿದ ಬಳಿಕ ಭಕ್ತಾದಿಗಳು ಹರಕೆ ಕಾಣಿಕೆ ಒಪ್ಪಿಸಿ ಪ್ರಸಾದ ಸ್ವೀಕರಿಸಿದರು. ಆಡಳಿತ ಮಂಡಳಿಯವರು, ತಕ್ಕ ಮುಖ್ಯಸ್ಥರು, ಊರ ಹಾಗೂ ಪರಊರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವರ ಉತ್ಸವದಲ್ಲಿ ಪಾಲ್ಗೊಂಡಿದ್ದರು.