ಶನಿವಾರಸಂತೆ, ಜೂ. ೪: ಪಟ್ಟ ಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಬಸ್ ತಂಗುದಾಣದಲ್ಲಿ ಕೂಲಿ ಹಾಗೂ ಭಿಕ್ಷಾಟನೆ ಮಾಡಿ ಕೊಂಡಿದ್ದ ಬಸವರಾಜ್ (೫೨) ಎಂಬ ವ್ಯಕ್ತಿ ಮಲಗಿದ ಸ್ಥಿತಿಯಲ್ಲಿ ಮೃತ ಪಟ್ಟಿದ್ದಾರೆ. ಕಳೆದ ೨೦ ವರ್ಷಗಳಿಂದ ಕುಟುಂಬದಿAದ ದೂರವಾಗಿ ಕೂಲಿ ಕೆಲಸ ಮತ್ತು ಭಿಕ್ಷಾಟನೆ ಮಾಡಿಕೊಂಡು ಅಲ್ಲಲ್ಲಿ ಅಂಗಡಿಮುAಗಟ್ಟು ಹಾಗೂ ಬಸ್ ತಂಗುದಾಣಗಳಲ್ಲಿ ಮಲಗಿ ಜೀವನ ಸಾಗಿಸುತ್ತಿದ್ದರು. ವಿಪರೀತ ಮದ್ಯ ವ್ಯಸನಿಯಾಗಿದ್ದ ಬಸವರಾಜು ಅನಾರೋಗ್ಯ ಕಾರಣದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಬುಧವಾರ ಬೆಳಿಗ್ಗೆ ಬಸ್ ತಂಗು ದಾಣದಲ್ಲಿ ಬಸವರಾಜ್ ಮೃತಪಟ್ಟಿರುವ ವಿಷಯವನ್ನು ಸಂಬAಧಿಯೊಬ್ಬರು ಬಸವರಾಜ್ ಸಹೋದರಿ ಕವಿತಾರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಸ್ಥಳಕ್ಕೆ ವೃತ್ತ ನಿರೀಕ್ಷಕ ಕೃಷ್ಣರಾಜ್, ಸಿಬ್ಬಂದಿ ಡಿಂಪಲ್, ಹರ್ಷ, ಸಂತೋಷ್ ಭೇಟಿ ನೀಡಿ ಪರಿಶೀಲಿಸಿ ರುತ್ತಾರೆ. ಸಹೋದರಿ ಕವಿತಾ, ಸಹೋದರ ಬಸವರಾಜ್ ಮೃತಪಟ್ಟಿ ರುವ ವಿಷಯದ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಪ್ರಕರಣ ದಾಖಲಾಗಿದೆ.